ಅಶ್ವತ್ಥನಾರಾಯಣ, ಹರೀಶ್ ಪೂಂಜಾ ವಿರುದ್ಧ ಕ್ರಮ: ಅಲೋಕ್ ಮೋಹನ್

Prasthutha|

ಬೆಂಗಳೂರು: ಸಿಎನ್ ಅಶ್ವತ್ಥನಾರಾಯಣ, ಹರೀಶ್ ಪೂಂಜಾ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಕ್ರಮ ಆಗಲಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹೇಳಿದ್ದಾರೆ.

- Advertisement -

ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳ ಸಭೆಯ ನಂತರ ಮಾಧ್ಯಮಗಳ ಜೊತೆ ಅವರು ಮಾತನಾಡುತ್ತಿದ್ದರು.


ಈಗಾಗಲೇ ಮೈಸೂರಿನಲ್ಲಿ ಮಾಜಿ ಸಚಿವ ಅಶ್ವಥ್ ನಾರಾಯಣ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಸೇರಿದಂತೆ ಒಟ್ಟು ಮೂರು ಕೇಸ್ ಆಗಿದೆ, ಈ ಬಗ್ಗೆ ಏನು ಹೇಳುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಕ್ರಮ ಆಗುತ್ತೆ. ಮುಂದೆ ಎಲ್ಲವೂ ಕೆಲಸ ಅಗುತ್ತೆ ಎಂದು ಹೇಳಿದರು.

- Advertisement -

ಇಂದು ಬೆಂಗಳೂರು ಸಿಟಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ರೌಡಿಗಳಿಗೆ ಜೀರೊ ಟಾಲರೆನ್ಸ್ ಇದೆ. ರೌಡಿಸಂ ಅನ್ನೊದು ಜೀರೋ ಆಗಬೇಕು. ಡ್ರಗ್ಸ್ ವಿರುದ್ಧ ಕ್ರಮ ಆಗಬೇಕು. ಬೆಂಗಳೂರು ಡ್ರಗ್ಸ್ ರಹಿತ ಸಿಟಿ ಆಗಬೇಕು. ಪೊಲೀಸರು ಒಳ್ಳೆಯ ರೀತಿಯಲ್ಲಿ ಸಾರ್ವಜನಿಕರ ಜೊತೆಗೆ ವರ್ತನೆ ಮಾಡಬೇಕು. ಜನ ಸ್ನೇಹಿ ಪೊಲೀಸ್ ಕೆಲಸ ಮಾಡಬೇಕು, ಸಾರ್ವಜನಿಕರ ದೂರುಗಳನ್ನು ಪಡೆದು ಪ್ರಕರಣ ದಾಖಲು ಮಾಡಬೇಕು ಎಂದರು.

Join Whatsapp