ಅಜ್ಮೀರ್‌ ಪ್ರವಾಸಕ್ಕೆಂದು ಹೋಗಿದ್ದ ಸುಳ್ಯದ ವಿದ್ಯಾರ್ಥಿ ಪುಣೆಯಲ್ಲಿ ಮೃತ್ಯು

Prasthutha|

- Advertisement -

ಸುಳ್ಯ : ಅಜ್ಮೀರ್‌ ಪ್ರವಾಸಕ್ಕೆಂದು ಹೋಗಿದ್ದ ಸುಳ್ಯದ
ವಿದ್ಯಾರ್ಥಿಯೋರ್ವರು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ಘಟನೆ ಪುಣೆಯಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಸಿದ್ದೀಖ್ ಅಲ್ ಮದೀನಿ ಮೃತ
ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

- Advertisement -

ಸುಳ್ಯ ಕರೀಂಬಿಲ ನಿವಾಸಿ ಇಬ್ರಾಹಿಂ ಸಖಾಫಿಯ ಪುತ್ರನಾಗಿರುವ ಇವರು ಉಪ್ಪಿನಂಗಡಿಯ ಸಮೀಪದ ಮೂಡಡ್ಕ ವಿದ್ಯಾ ಸಂಸ್ಥೆಯಲ್ಲಿ ಅಲ್ ಮದೀನಿ ಬಿರುದು ಪಡೆದು ಉನ್ನತ ವಿದ್ಯಾಭ್ಯಾಸಕ್ಕಾಗಿ ಕೇರಳದ ಕುಟ್ಯಾಡಿಯಲ್ಲಿ ವಿದ್ಯಾರ್ಜನಗೈಯುತ್ತಿದ್ದರು ಎನ್ನಲಾಗಿದೆ.

ಸಂಸ್ಥೆಯ ಸ್ನೇಹಿತರ ಜತೆ ಮೊನ್ನೆ ಅಜ್ಮೀರ್ ಪ್ರವಾಸಕ್ಕೆಂದು ಹೋಗಿದ್ದ ಅವರಿಗೆ ಪುಣೆಯಲ್ಲಿ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾಗಿ ಎನ್ನಲಾಗಿದೆ.

ಸಿದ್ದೀಕ್ ಅಲ್ ಮದೀನಿ ಅವರ ಮೃತದೇಹ ಪುಣೆಯಿಂದ ವಿಮಾನದ ಮೂಲಕ ಮಂಗಳೂರಿಗೆ ತರಲಾಗುವುದು ಎಂದು ತಿಳಿದು ಬಂದಿದೆ.

Join Whatsapp