ಕುರ್’ಆನ್ ತಿದ್ದುಪಡಿ ಮಾಡಲು ಯಾರಿಗೂ ಸಾಧ್ಯವಿಲ್ಲ : ಎ ಪಿ ಅಬೂಬಕ್ಕರ್ ಮುಸ್ಲಿಯಾರ್

Prasthutha|

ಕುರ್’ಆನ್‌ನ ಕೆಲವು ವಚನಗಳನ್ನು ತೆಗೆದುಹಾಕುವಂತೆ ಕೋರಿ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಸೀಮ್ ರಿಝ್ವಿ ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಸುನ್ನೀ ಜಮೀಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್, “ಯಾರಿಗೂ ಕೂಡ ಕುರಾನ್ ತಿದ್ದುಪಡಿ ಮಾಡಲು ಅವಕಾಶವಿಲ್ಲ . ಆ ಅಧಿಕಾರ ಅಲ್ಲಾಹನ ಹೊರತು ಬೇರೆ ಯಾರಿಗೂ ಇಲ್ಲ” ಎಂದು ಹೇಳಿದ್ದಾರೆ.

- Advertisement -

ಮಂಗಳೂರಿನ ಕಾರ್ಕಳ ಸಮೀಪದ ಬಂಗ್ಲೆಗುಡ್ಡೆ ತೈಬಾ ಗಾರ್ಡನ್ ನಲ್ಲಿ ಮಾತನಾಡಿದ ಅವರು ಕುರ್’ಆನ್ ಎಂಬುದು ಇಸ್ಲಾಂ ಧರ್ಮದ ಆಶಯಗಳನ್ನು ಜಗತ್ತಿಗೆ ತಿಳಿಸಲು ಅವತೀರ್ಣಗೊಂಡ ಪರಿಪೂರ್ಣ ಕೃತಿ. ಮನುಷ್ಯರಿಂದ ಅದರ ಮೇಲಿನ ದಾಳಿ ಅಥವಾ ತಿದ್ದುವಿಕೆ ಅಸಾಧ್ಯವಾದುದು. ಅಂತಹಾ ಪ್ರಯತ್ನಗಳು ಇದುವರೆಗೆ ವಿಫಲವಾಗಿದೆ ಎಂದು ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಹೇಳಿದ್ದಾರೆ.

Join Whatsapp