ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಗೆ ಯು.ಟಿ.ಖಾದರ್ ಅಭಿನಂದನೆ

Prasthutha|

ಕೇರಳ ವಿಧಾನಸಭೆಯಲ್ಲಿ ಶಾಸಕರಾಗಿ ಕನ್ನಡದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದ ಮಂಜೇಶ್ವರ ಶಾಸಕ ಎ. ಕೆ. ಎಂ. ಅಶ್ರಫ್ ರವರನ್ನು ಮಾಜಿ ಸಚಿವ. ಶಾಸಕ ಯು ಟಿ ಖಾದರ್ ಅವರು ಅಭಿನಂದಿಸಿದ್ದಾರೆ.  ರಾಷ್ಟ್ರಕವಿ ಗೋವಿಂದ ಪೈ ಸರಕಾರಿ ಕಾಲೇಜಿನಲ್ಲಿ ಕನ್ನಡದಲ್ಲಿ ಪದವಿ ಪಡೆದ ಅಚ್ಚ ಕನ್ನಡಿಗ ಎಕೆಎಂ ಅಶ್ರಫ್ ರವರು ಕೇರಳ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿರುವುದು ಗಡಿನಾಡ ಕನ್ನಡಿಗರ ಪಾಲಿಗೆ ಹೆಮ್ಮೆಯಾಗಿದೆ.  ಭಾಷಾ ಅಲ್ಪಸಂಖ್ಯಾತ ಕಾಸರಗೋಡಿನ ಗಡಿನಾಡ ಕನ್ನಡಿಗರಿಗೆ ಸರಕಾರದಿಂದ ಸಕಲ ಸವಲತ್ತು ದೊರಕಿಸಲು ಎಕೆಎಂ ಅಶ್ರಫ್ ರವರಿಂದ ಸಾಧ್ಯ. ಎಕೆಎಂ ಅಶ್ರಫ್ ರವರ ಮುಂದಾಳತ್ವದಲ್ಲಿ ಗಡಿನಾಡ ಮಂಜೇಶ್ವರ ಕ್ಷೇತ್ರ ಸಮಗ್ರ ಅಭಿವೃದ್ಧಿ  ಕಾಣುವಂತಾಗಲಿ ಎಂದು ಅವರು ಹಾರೈಸಿದ್ದಾರೆ.

Join Whatsapp