ಈಜಲು ಹೋಗಿದ್ದ 6 ವಿದ್ಯಾರ್ಥಿಗಳು ನೀರುಪಾಲು !

Prasthutha|

ಹೈದರಾಬಾದ್: ಈಜಲು ಹೋಗಿದ್ದ ಆರು ಮಂದಿ ವಿದ್ಯಾರ್ಥಿಗಳು ನೀರುಪಾಲಾದ ಘಟನೆ ತೆಲಂಗಾಣದ ಸಿರ್ಸಿಲ್ಲಾ ಜಿಲ್ಲೆಯ ಮನೈರ್ ನದಿಯಲ್ಲಿ ನಡೆದಿದೆ.

- Advertisement -

ವೆಂಕಂಪೇಟ ಸರ್ಕಾರಿ ಬಾಲಕರ ಶಾಲೆಯಲ್ಲಿ ಓದುತ್ತಿದ್ದ ಈ ವಿದ್ಯಾರ್ಥಿಗಳು ಶಾಲೆ ಬಿಟ್ಟ ಬಳಿಕ ಈಜಾಡಲು ಮನೈರ್ ನದಿಗೆ ತೆರಳಿದ್ದಾರೆ. ನದಿ ನೀರಿನ ಹರಿವು ರಭಸವಾಗಿದ್ದನ್ನು ಅರಿಯದ ವಿದ್ಯಾರ್ಥಿಗಳು ಏಕಾಏಕಿ ನೀರಿಗೆ ಇಳಿದಾಗ ನೋಡನೋಡುತ್ತಿದ್ದಂತೆ ಆರು ವಿದ್ಯಾಥಿರ್ಗಳು ಕೊಚ್ಚಿ ಹೋಗಿದ್ದಾರೆ.

ಸ್ಥಳದಲ್ಲಿ ಎನ್ ಡಿ ಆರ್ ಎಫ್ ತಂಡಗಳು ಶೋಧ ಕಾರ್ಯಾಚರಣೆ ನಡೆಸಿ ಐದು ಮಂದಿ ವಿದ್ಯಾರ್ಥಿಗಳ ಮೃತದೇಹಗಳನ್ನು ಪತ್ತೆ ಹಚ್ಚಿವೆ. ಇನ್ನೊಬ್ಬ ವಿದ್ಯಾರ್ಥಿ ನಾಪತ್ತೆಯಾಗಿದ್ದು, ಶೋಧ ಮುಂದುವರೆಸಿದ್ದಾರೆ.

Join Whatsapp