ರೈತರನ್ನು ಭಯೋತ್ಪಾದಕರೆಂದ ಕಂಗನಾ!

Prasthutha|


ಕೇಂದ್ರ ಸರಕಾರದ ವಿರುದ್ಧ ಪ್ರತಿಭಟಿಸುತ್ತಿರುವವರು ಭಯೋತ್ಪಾದಕರು ಅವರು ರೈತರಲ್ಲ ಎಂದು ಕಂಗಣಾ ರಾವತ್ ಹೇಳಿದ್ದಾರೆ. ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರ ಹೋರಾಟವನ್ನು ಬೆಂಬಲಿಸಿ “ಯಾರೂ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ?” ಎಂದು ಟ್ವೀಟ್ ಮಾಡಿದ್ದ ಪಾಪ್ ಗಾಯಕಿ ರಿಹಾನ್ನಾ ಅವರಿಗೆ ಕಂಗಣಾ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸಿಎನ್ಎನ್ ಪ್ರಸಾರ ಮಾಡಿದ್ದ ಸುದ್ದಿಗಳನ್ನು ಹಂಚಿಕೊಳ್ಳುವ ಮೂಲಕ ರಿಹಾನ್ನಾ ರೈತರಿಗೆ ಬೆಂಬಲ ಘೋಷಿಸಿದ್ದರು.

- Advertisement -

“ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ, ಯಾಕೆಂದರೆ ಅವರು ರೈತರಲ್ಲ ದೇಶವನ್ನು ವಿಭಜಿಸಲು ಪಣ ತೊಟ್ಟಿರುವ ಭಯೋತ್ಪಾದಕರು. ಇದರಿಂದಾಗಿ ವಿಭಜನೆಗೊಂಡ ದೇಶವನ್ನು ಚೀನಾ ವಶಪಡಿಸಿ ಅಮೇರಿಕಾದಂತೆ ಚೈನೀಸ್ ಕಾಲನಿಯಾಗಿ ಮಾರ್ಪಡಿಸಲಿದೆ. ಕುಳಿತು ಕೋ ಮೂರ್ಖಿ ನಾವು ನಿಮ್ಮಂತೆ ಕಪಟಿಗಳ ರೀತಿ ನಮ್ಮ ದೇಶವನ್ನು ಮಾರಾಟ ಮಾಡುವುದಿಲ್ಲ” ಎಂದು ಕಂಗನಾ ಪ್ರತಿಕ್ರಿಯಿಸಿದ್ದಾರೆ.

Join Whatsapp