ಮಹಾರಾಷ್ಟ್ರ: ಇನ್ನು 6 ತಿಂಗಳಲ್ಲಿ ಶಿಂಧೆ ಸರಕಾರ ಪತನವಾಗಲಿದೆ – ಎನ್ ಸಿ ಪಿ ಮುಖಂಡ ಶರದ್ ಪವಾರ್

Prasthutha|

ಮುಂಬೈ: ಮಹಾರಾಷ್ಟ್ರದಲ್ಲಿ ಮೋಸದ ರಾಜಕೀಯ ಮೂಲಕ ಅಧಿಕಾರ ಗಿಟ್ಟಿಸಿಕೊಂಡ ಏಕನಾಥ್ ಶಿಂಧೆಯ ಸರಕಾರ ಇನ್ನು ಆರು ತಿಂಗಳ ಅವಧಿಯ ಮುಂಚಿತವಾಗಿ ಪತನವಾಗಲಿದೆ ಎಂದು ಎನ್ಸಿಪಿ ಮುಖಂಡ ಶರದ್ ಪವಾರ್ ಹೇಳಿದ್ದಾರೆ.

- Advertisement -

‘ಶಿಂಧೆಯ ಆಡಳಿತದಲ್ಲಿರುವ ಅನೇಕ ಶಾಸಕರು ಅತೃಪ್ತರಾಗಿದ್ದಾರೆ. 6 ತಿಂಗಳಲ್ಲಿ ಈ ಸರಕಾರವು ಉರುಳಲಿದೆ. ಈ ನಿಟ್ಟಿನಲ್ಲಿ ಮಧ್ಯಂತರ ಚುನಾವಣೆಗೆ ಸಿದ್ಧರಾಗಿ’ ಎಂದು ಶಿಂಧೆ ಸರಕಾರದ ಭವಿಷ್ಯ ನುಡಿದಿದ್ದಾರೆ.

‘ಮುಂದಿನ ದಿನಗಳಲ್ಲಿ ಶಿಂಧೆ ಸರ್ಕಾರದ ವೈಫಲ್ಯದ ಕಾರಣದಿಂದ ಅನೇಕ ಬಂಡಾಯ ಶಾಸಕರು ತಮ್ಮ ಮೂಲ ಪಕ್ಷಕ್ಕೆ ಮರಳುವ ಸಾಧ್ಯತೆಗಳಿವೆ’ ಎಂದೂ ಈ ಸಂದರ್ಭದಲ್ಲಿ ಶರದ್ ಪವಾರ್ ಹೇಳಿದ್ದಾರೆ.

Join Whatsapp