ಡಾ. ಸಮೀರಾ ಮೀನಾಝ್’ಗೆ ಆಯುರ್ವೇದ ಎಂ ಡಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ‍್ಯಾಂಕ್

Prasthutha|

ಬೆಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಹಮ್ಮಿಕೊಂಡಿದ್ದ ಆಯುರ್ವೇದದ ಸ್ನಾತಕೋತ್ತರ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೃಷ್ಣಾಪುರದ ಡಾ. ಸಮೀರಾ ಮೀನಾಝ್ ರಾಜ್ಯದಲ್ಲಿ ಮೂರನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.    ಸಮೀರಾ ಅವರು ಉಡುಪಿ ಎಸ್ ಡಿ ಎಂ ಆಯುರ್ವೇದ ಕಾಲೇಜಿನಲ್ಲಿ ವ್ಯಾಸಂಗ ನಡೆಸಿದ್ದರು. ಸಮೀರಾ ಅವರು ಕಾಯಾ ಚಿಕಿತ್ಸೆ ಮತ್ತು ಮಾನಸರೋಗ ವಿಭಾಗದಲ್ಲಿ ಎಂ ಡಿ ಪದವಿ ಪೂರ್ತಿಗೊಳಿಸಿದ್ದಾರೆ.

- Advertisement -

ಕಳೆದ ನವಂಬರ್ ತಿಂಗಳಿನಲ್ಲಿ ನಡೆದ ಪರೀಕ್ಷೆಯಲ್ಲಿ 667 ಅಂಕಗಳೊಂದಿಗೆ ಡಾ. ಸಮೀರಾ ಮೀನಾಝ್ ಅವರು ಮೂರನೇ ರ‍್ಯಾಂಕ್ ಗಳಿಸಿ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಅನಿವಾಸಿ ಉದ್ಯೋಗಿಯಾಗಿರುವ ಹಸನ್ ಶಾಕೀರ್ ಅವರನ್ನು ವರಿಸಿರುವ ಸಮೀರಾ ಅವರು ದಿವಂಗತ ಇಸ್ಮಾಯೀಲ್ ಪಡುಬಿದ್ರೆ ಹಾಗೂ ತಾಹಿರಾ ಸಂತೋಷ ನಗರ ದಂಪತಿಗಳ ಪುತ್ರಿಯಾಗಿದ್ದಾರೆ.  

Join Whatsapp