ಕಾಂಗ್ರೆಸ್ ರಾಜ್ಯವನ್ನು ಲೂಟಿ ಮಾಡಿ 3000 ಕೋಟಿ ಹಣ ಸೋನಿಯಾಗಾಂಧಿಗೆ ಕೊಟ್ಟಿದೆ: ದೇವೇಗೌಡ

Prasthutha|

ಬೆಂಗಳೂರು : ಕಾಂಗ್ರೆಸ್ ರಾಜ್ಯವನ್ನು ಲೂಟಿ ಮಾಡಿ 2500-3000 ಕೋಟಿ ಹಣ ಸೋನಿಯಾಗಾಂಧಿಗೆ ಕೊಟ್ಟಿದೆ ಎಂದು ಮಾಜಿ‌ ಪಿಎಂ ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ.

- Advertisement -

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ‌ಮಾತನಾಡಿದ ಮಾಜಿ ಪ್ರಧಾನಿ,ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದ ಜನರಿಂದ ಲೂಟಿ ಮಾಡಿದೆ ಲೋಕಸಭಾ ಚುನಾವಣೆ ಮುಗಿದ ತಕ್ಷಣ ಕಾಂಗ್ರೆಸ್ ಸರ್ಕಾರ ಇರಲ್ಲ ಎಂದು ಭವಿಷ್ಯ ನುಡಿದರು.

ನಾನು ಬೇಜವಾಬ್ದಾರಿಯಿಂದ ಮಾತನಾಡುತ್ತಿಲ್ಲ.ಲೋಕಸಭೆ ಚುನಾವಣೆಯ ಮುಗಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸರಕಾರ ಪತನವಾಗಲಿದೆ. ಪ್ರಧಾನ ಮಂತ್ರಿ ಮೋದಿಗೆ ಎದುರು ನಿಲ್ಲುವ ಒಬ್ಬ ಮುಖಂಡ ಮೈತ್ರಿ‌ಕೂಟದಲ್ಲಿ ಇಲ್ಲ. ಮಮತಾ ಬ್ಯಾನರ್ಜಿ, ಸ್ಟಾಲಿನ್, ಡಿಕೆ ಶಿವಕುಮಾರ್ ಪ್ರಧಾನಿ ಎದುರು ನಿಲ್ಲುತ್ತಾರಾ ಎಂದು ದೇವೇಗೌಡ ಟೀಕ್ರಾಪ್ರಹಾರ ನಡೆಸಿದ್ದಾರೆ.

Join Whatsapp