ಬಂಟ್ವಾಳ | ನಾಸಿರ್ ಸಜಿಪ ಕೊಲೆ ಪ್ರಕರಣ: ಸಂಘಪರಿವಾರದ ನಾಲ್ವರಿಗೆ ಜೀವಾವಧಿ ಶಿಕ್ಷೆ

Prasthutha|

ಮಂಗಳೂರು: ಕೋಮುದ್ವೇಷದಿಂದ ಕೊಲೆಯಾದ ಮಹಮ್ಮದ್ ನಾಸಿರ್ ಹಂತಕರಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ತಲಾ 30 ಸಾವಿರ ರೂ. ದಂಡ ವಿಧಿಸಿದೆ.

- Advertisement -


ಬಂಟ್ವಾಳ ತಾಲೂಕು ಮಂಚಿ ಗ್ರಾಮದ ವಿಜೇತ್ ಕುಮಾರ್ (22), ಅಭಿ ಯಾನೇ ಅಭಿಜಿತ್ (24) ಮಂಗಳೂರು ತಾಲೂಕು ಬಡಗ ಉಳಿಪ್ಪಾಡಿ ಗ್ರಾಮದ ಮಳಲಿ ಮಟ್ಟಿಮನೆ ಕಿರಣ್ ಪೂಜಾರಿ (24), ತಿರುವೈಲು ಗ್ರಾಮದ ಅನೀಶ್ ಯಾನೆ ಧನು (23) ಶಿಕ್ಷೆಗೊಳಗಾದವರು.


ಬಂಟ್ವಾಳ ತಾಲೂಕು ಸಜಿಪ ಮೂಡ ಗ್ರಾಮದ ಕೊಳಕೆ ಕಂದೂರು ಎಂಬಲ್ಲಿ ನಾಸಿರ್ ಸಜಿಪ ಪ್ರಯಾಣಿಸುತ್ತಿದ್ದ ರಿಕ್ಷಾವನ್ನು ತಡೆದು ನಿಲ್ಲಿಸಿ, ದಾರಿಕೇಳುವ ನೆಪವೊಡ್ಡಿ 1ನೇ ಆರೋಪಿ ವಿಜೇತ್ ಕುಮಾರ್ ಕೈಯಲ್ಲಿದ್ದ ತಲವಾರಿನಿಂದ ರಿಕ್ಷಾ ಚಾಲಕ ಮುಸ್ತಾಫ ಅವರ ಕೈಗೆ ಮತ್ತು ಎದೆಗೆ ಬಲವಾಗಿ ಕಡಿದು ಹಲ್ಲೆ ನಡೆಸಿದ್ದಾನೆ. 2ನೇ ಆರೋಪಿ ಕಿರಣ್ ಪೂಜಾರಿ ಪ್ರಯಾಣಿಕರ ಸೀಟ್ ನಲ್ಲಿ ಕುಳಿತಿದ್ದ ನಾಸಿರ್ ಗೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ್ದಾನೆ. ತೀವ್ರ ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ನಾಸಿರ್ ಅವರು ಮೃತಪಟ್ಟಿದ್ದರು.

Join Whatsapp