ಕೊಡಗು: ಹುಲಿಯ ಭೀಕರ ದಾಳಿಗೆ ವ್ಯಕ್ತಿ ಸ್ಥಳದಲ್ಲಿಯೇ ಮೃತ

Prasthutha|

ಗೋಣಿಕೊಪ್ಪಲು: ಅಸ್ಸಾಂನಿಂದ ಬಂದು ಕೆಲಸ ಮಾಡುತ್ತಿದ್ದ ಮುಝೀದ್ ರೆಹಮಾನ್ (55) ಎಂಬುವವರ ಮೇಲೆ ಹುಲಿ ದಾಳಿ‌ ಮಾಡಿದ್ದು, ಅವರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ನಿಟ್ಟೂರು ಜಾಗಲೆ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

- Advertisement -

ಮುಝೀದ್ ರೆಹಮಾನ್ ಜಾನುವಾರು ಮೇಯಿಸುತ್ತಿದ್ದಾಗ ಪ್ರತ್ಯಕ್ಷವಾದ ಹುಲಿ ಹಸುಗಳ ಮೇಲೆ ಎರಗಿದೆ. ಹಸುಗಳು ಬೆದರಿ ದೂರ ಓಡಿ ಹೋದಾಗ ಪಕ್ಕದಲ್ಲೇ ಇದ್ದ ಮುಝೀದ್ ರೆಹಮಾನ್ ಅವರನ್ನು ಹುಲಿ ಹಿಡಿದಿದೆ. ಅವರ ಮೇಲೆ ಎಷ್ಟು ಭೀಕರವಾಗಿ ದಾಳಿ ನಡೆಸಿದೆ ಎಂದರೆ, ತೀವ್ರವಾಗಿ ಗಾಯಗೊಂಡ ಮುಝೀದ್ ರೆಹಮಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಡಗು ಜಿಲ್ಲೆಯೊಂದರಲ್ಲಿ 2014ರ ಜನವರಿಯಿಂದ ಇಲ್ಲಿಯವರೆಗೆ ಕಾಡುಜೀವಿ ದಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿದೆ. 6 ಮಂದಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.

Join Whatsapp