ಬೆಳ್ತಂಗಡಿ: ತಾನೇ ಸಾಕಿದ ನಾಯಿಯ ದಾಳಿಗೆ ತಲೆ ಸೀಳಲ್ಪಟ್ಟು ಗಂಭೀರ ಗಾಯಗೊಂಡ ಮಹಿಳೆ

Prasthutha|

ಬೆಳ್ತಂಗಡಿ: ಮನೆಯ ಸಾಕು ನಾಯಿಯೇ ಮನೆ ಮಾಲಕಿ ಮೇಲೆ ದಾಳಿ ಮಾಡಿ ತಲೆ ಸೀಳಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಮಧ್ಯಾಹ್ನ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದಲ್ಲಿ ನಡೆದಿದೆ.

- Advertisement -

ಮುಂಡಾಜೆ ಗ್ರಾಮದ ನಿಡಿಗಲ್‌ ಓಂಕಾರ್‌ನಲ್ಲಿ ಘಟನೆ ನಡೆದಿದೆ. ಇಲ್ಲಿಯ ದಿ. ರಾಮ್ ದಾಸ್‌ ಪ್ರಭು ಅವರ ಪತ್ನಿ ಪೂರ್ಣಿಮಾ (49) ತನ್ನದೇ ಸಾಕು ನಾಯಿಯ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡ ಮಹಿಳೆ.

ಪೂರ್ಣಿಮಾ ತನ್ನ ಮನೆಯಲ್ಲಿ ಸಾಕಿದ್ದ ಸಾಕು ನಾಯಿ ಜತೆ ಎಂದಿನಂತೆ ಆಟವಾಡುತ್ತಿದ್ದರು. ಈ ವೇಳೆ ಅವರು ಕಾಲು ಜಾರಿ ನೆಲಕ್ಕೆ ಜಾರಿಬಿದ್ದಿದ್ದಾರೆ. ಈ ವೇಳೆ ಸಾಕು ನಾಯಿ ಅವರ ಮೇಲೆ ದಾಳಿ ಮಾಡಿದೆ. ಪೂರ್ಣಿಮಾ ಅವರ ತಲೆಯ ಚಿಪ್ಪು ಎದ್ದು ಬರುವಷ್ಟು ಗಂಭೀರ ಗಾಯಗಳಾಗಿದೆ. ಕೈ ಕಾಲಿಗೂ ಕಚ್ಚಿ ಗಂಭೀರ ಗಾಯಮಾಡಿದೆ.

- Advertisement -

ಮನೆಯವರ ಗಮನಕ್ಕೆ ಬಂದ ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರೆ, ಅಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಹೇಳಿದ್ದಾರೆ. ಅದರಂತೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Join Whatsapp