ಭಯೋತ್ಪಾದಕರು ಮದ್ರಸಾಗಳಲ್ಲಿ ಕಲಿತವರು: ಮಧ್ಯ ಪ್ರದೇಶ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ವಿವಾದಾಸ್ಪದ ಹೇಳಿಕೆ

Prasthutha|

►► ಜಮ್ಮು-ಕಾಶ್ಮೀರ ಭಯೋತ್ಪಾದಕರ ಕಾರ್ಖಾನೆ ಎಂದ ಸಚಿವೆ

- Advertisement -

ಭೋಪಾಲ್: ಎಲ್ಲಾಮೂಲಭೂತವಾದಿಗಳು ಮತ್ತು ಭಯೋತ್ಪಾದಕರು ಮದ್ರಸಾಗಳಲ್ಲಿ ಕಲಿತವರು ಎಂದು ಮಧ್ಯ ಪ್ರದೇಶದ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಹೇಳಿರುವುದಾಗಿ ನ್ಯೂಸ್ 18 ವರದಿ ಮಾಡಿದೆ.

“ನೀವು ಈ ದೇಶದ ನಾಗರಿಕರಾಗಿದ್ದರೆ, ಮೂಲಭೂತವಾದಿಗಳು ಮತ್ತು ಭಯೋತ್ಪಾದಕರು ಮದ್ರಾಸಾಗಳಲ್ಲಿ ಕಲಿತಿರುವುದನ್ನು ಕಾಣಬಹುದು. ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದನೆಯ ಕಾರ್ಖಾನೆಯಾಗಿದೆ” ಎಂದು ಅವರು ಹೇಳಿದ್ದಾರೆ.

- Advertisement -

ಮಕ್ಕಳನ್ನು ರಾಷ್ಟ್ರೀಯತೆಯ ಸಂಪರ್ಕಕ್ಕೆ ತರಲು ವಿಫಲವಾಗುವ ಮದ್ರಸಾಗಳನ್ನು “ಸಮಾಜದ ಸಾಮೂಹಿಕ ಪ್ರಗತಿ”ಗಾಗಿ ಮುಖ್ಯವಾಹಿನಿ ಶಿಕ್ಷಣದಡಿ ತೆಗೆದುಕೊಂಡು ಬರಬೇಕು ಎಂದು ಅವರು ಹೇಳಿದ್ದಾರೆ.

ತನ್ನ ಹೇಳಿಕೆಯನ್ನು ಬೆಂಬಲಿಸುವುದಕ್ಕಾಗಿ ಆಕೆ ಮದ್ರಸಾಗಳನ್ನು ಮುಚ್ಚುವ ಅಸ್ಸಾಮ್ ನ ಇತ್ತೀಚಿನ ಪ್ರಕಟನೆಯನ್ನು ಉಲ್ಲೇಖಿಸಿದರು. “ಅಸ್ಸಾಂ ಇದನ್ನು ಯಶಸ್ವಿಗೊಳಿಸಿ ತೋರಿಸಿದೆ…. ರಾಷ್ಟ್ರೀಯತೆಯ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುವ ಎಲ್ಲಾ ಸಂಸ್ಥೆಗಳನ್ನು ರಾಷ್ಟ್ರೀಯ ಹಿತಾಸಕ್ತಿಯ ಭಾಗವಾಗಿ ಮುಚ್ಚಬೇಕು” ಎಂದು ಅವರು ಹೇಳಿದರು.

Join Whatsapp