ಕುಡಿದ ಮತ್ತಿನಲ್ಲಿ ಜಗಳ: ಯುವಕನ ಕೊಲೆಯಲ್ಲಿ ಅಂತ್ಯ

Prasthutha|

ಬೆಂಗಳೂರು: ಕುಡಿದ ಅಮಲಿನಲ್ಲಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದೇವರಜೀವನಹಳ್ಳಿಯ ಶ್ರೀನಿವಾಸನಗರದಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ. ದೇವರಜೀವನಹಳ್ಳಿಯ ಶ್ರೀನಿವಾಸನಗರ ನಿತೇಶ್ ಕೊಲೆಯಾದವರು. ಘಟನೆ ಸಂಬಂಧ ಮೃತರ ಸ್ನೇಹಿತ ಪ್ರಶಾಂಶ್ ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸ್ನೇಹಿತರಾಗಿದ್ದ ನಿತೇಶ್ ಹಾಗೂ ಪ್ರಶಾಂತ್ ತಡರಾತ್ರಿ ಒಟ್ಟಿಗೆ ಪಾರ್ಟಿ ಮಾಡಿದ್ದು ಕುಡಿದ ಅಮಲಿನಲ್ಲಿ ನಿತೇಶ್ ಕಾಲಿಗೆ ಒದ್ದಿದ್ದಾನೆ. ಇದರಿಂದ ಕೋಪಗೊಂಡ ಪ್ರಶಾಂತ್ ಜಗಳ ತೆಗೆದಿದ್ದಾನೆ.

- Advertisement -


ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಅಲ್ಲೇ ಇದ್ದ ಸಿಮೆಂಟ್ ಇಟ್ಟಿಗೆ (ಹಾಲೋ ಬ್ರಿಕ್ಸ್) ಅನ್ನು ನಿತೇಶ್ ಮೇಲೆ ಎತ್ತಿಹಾಕಿ ಕೊಲೆ ಮಾಡಿ ಪ್ರಶಾಂತ್ ಪರಾರಿಯಾಗಿದ್ದಾನೆ. ಕೊಲೆಯ ಮಾಹಿತಿ ಬಂದ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ದೇವರಜೀವನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ತೀವ್ರಗೊಳಿಸಿದ್ದಾರೆ ಎಂದು ಡಿಸಿಪಿ ಡಾ ಶರಣಪ್ಪ ತಿಳಿಸಿದ್ದಾರೆ

Join Whatsapp