ಉತ್ತರ ಪ್ರದೇಶ: ಹಿಂದುತ್ವವಾದಿಗಳಿಂದ ಮುಸ್ಲಿಮ್ ಸಹೋದರರ ಭೀಕರ ಹತ್ಯೆ

Prasthutha|

ಲಕ್ನೋ: ಹಿಂದುತ್ವವಾದಿಗಳು ಮುಸ್ಲಿಮ್ ಸಹೋದರರಾದ ಜಾಫರ್ ಮತ್ತು ಕಿರಿಯ ಸಹೋದರ ನೂರು ಎಂಬವರನ್ನು ಗುಂಪು ಹಿಂಸೆಯ ಮೂಲಕ ಭೀಕರವಾಗಿ ಹತ್ಯೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿಯಿಂದ ವರದಿಯಾಗಿದೆ.

- Advertisement -

ಘಟನೆಗೆ ಸಂಬಂಧಿಸಿ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಂಘಪರಿವಾರದ ಕಾರ್ಯಕರ್ತರು ಹಿರಿಯ ಸಹೋದರ ಜಾಫರ್ ಮತ್ತು ಕಿರಿಯ ಸಹೋದರ ನೂರ್ ಎಂಬವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು.

ಈ ಮಧ್ಯೆ ಸಂಘಪರಿವಾರದ ಕಾರ್ಯಕರ್ತರಿಂದ ಗಂಭೀರವಾಗಿ ದಾಳಿಗೊಳಗಾದ ಜಾಫರ್ ಸ್ಥಳದಲ್ಲೇ ಮೃತಪಟ್ಟರೆ, ಚಿಂತಾಜನಕ ಸ್ಥಿತಿಯಲ್ಲಿದ್ದ ಆತನ ಕಿರಿಯ ಸಹೋದರ ನೂರ್ ಎಂಬಾತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

Join Whatsapp