ಕಿಟಕಿ ಅಳವಡಿಸುವಾಗ 17ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು

Prasthutha|

ಬೆಂಗಳೂರು ; ಕಬ್ಬಿಣದ ಕಿಟಕಿ ಅಳವಡಿಸುವ ವೇಳೆ 17ನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಮಾದನಾಯ್ಕನಹಳ್ಳಿಯ ಚಿಕ್ಕಬಿದರಕಲ್ಲುವಿನ ಪ್ರೆಸ್ಟೀಜ್ ಜಿಂದಾಲ್ ಸಿಟಿಯಲ್ಲಿ ನಡೆದಿದೆ.

- Advertisement -


ಉತ್ತರ ಪ್ರದೇಶ ಮೂಲದ ನಜೀಮುದ್ದೀನ್ (44) ಮೃತ ಕಾರ್ಮಿಕ. ಜಿಂದಾಲ್ ಸಿಟಿ ಅಪಾರ್ಟ್ಮೆಂಟ್ ನಲ್ಲಿ ಇಂತಹ ಎರಡನೇ ಅವಘಡ ಸಂಭವಿಸಿದ್ದು, ಪ್ರತಿಷ್ಠಿತ ಪ್ರೆಸ್ಟೀಜ್ ಜಿಂದಾಲ್ ಸಿಟಿ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದೆ.


ಕಬ್ಬಿಣದ ಕುಟಕಿ ಅಳವಡಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾರ್ಮಿಕರ ಸುರಕ್ಷತೆ ಕ್ರಮ ಅನುಸರಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ಜಿಂದಾಲ್ ಸಿಟಿ ಕಂಪನಿಯ ಮೇಲ್ವಿಚಾರಕ ರಾಹುಲ್ ಹಾಗೂ ಗುತ್ತಿಗೆದಾರನ ವಿರುದ್ಧ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.ಕಳೆದ ಮಾರ್ಚ್ 22 ರಂದು 6ನೇ ಮಹಡಿಯಿಂದ ಬಿದ್ದು ಕಾರ್ಮಿಕ ಬಾಲೇಂದ್ರ (30) ಮೃತ ಪಟ್ಟಿದ್ದರು. ಈ ಬೆನ್ನಲ್ಲೇ ಜಿಂದಾಲ್ ಸಿಟಿಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.

Join Whatsapp