ಸುರತ್ಕಲ್ ಘಟನೆಯ ಬಗ್ಗೆ ನಿಮ್ಮ ಆ ‘ಕಠಿಣ ಕ್ರಮ’ ಎಲ್ಲಿ ಕಳೆದು ಹೋಗಿದೆ? : ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ

Prasthutha|

ಬೆಂಗಳೂರು: ಬಿಜೆಪಿ ಸರ್ಕಾರ ತಾನು ಸಾಕಿರುವ ಭಯೋತ್ಪಾದಕ ಪಡೆಗಳ ಮೂಲಕ ತಾಲಿಬಾನ್ ಮಾದರಿಯ ವ್ಯವಸ್ಥೆ ನಿರ್ಮಾಣ ಮಾಡುತ್ತಿದೆ . ಅನೈತಿಕ ಪೊಲೀಸ್ ಗಿರಿ ನಡೆಸಿದ್ದಲ್ಲದೆ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಳ್ಳಾಲ್ ಅವರಿಗೆ ಮಾಧ್ಯಮ ಸಂವಾದದಲ್ಲಿಯೇ ಬಹಿರಂಗವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ ಬಜರಂಗದಳದ ಕಾರ್ಯಕರ್ತನನ್ನು ಇನ್ನೂ ಸಹ ಬಂಧಿಸಲಾಗಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬೊಮ್ಮಾಯಿ ಅವರೇ, ಅನೈತಿಕ ಪೊಲೀಸ್ ಗಿರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದೀರಿ, ಸುರತ್ಕಲ್ ಘಟನೆಯ ಬಗ್ಗೆ ನಿಮ್ಮ ಆ ‘ಕಠಿಣ ಕ್ರಮ’ ಎಲ್ಲಿ ಕಳೆದು ಹೋಗಿದೆ? ಬಹಿರಂಗವಾಗಿ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕುವ ಧೈರ್ಯವನ್ನು ನಿಮ್ಮ ಸರ್ಕಾರವೇ ನೀಡುತ್ತಿದೆಯೇ? ಮಹಿಳೆಯರಿಗೆ ನಿರ್ಭಿತ ವಾತಾವರಣ ನಿರ್ಮಿಸಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದೆ.

ಗಾಂಧಿ ಕೊಲೆಗೆ ಷಡ್ಯಂತ್ರ ರೂಪಿಸಿದ ಆರೋಪಿ ಹೇಡಿ ಸಾವರ್ಕರ್ ಹಾಗೂ ಭಾರತದ ಮೊದಲ ಭಯೋತ್ಪಾದಕ ಗೋಡ್ಸೆಯ ಆರಾಧಕರು ಇಂದು ದೇಶವನ್ನು ಆಳುತ್ತಿದ್ದಾರೆ. ಗಾಂಧಿ ಹಾಗೂ ಅವರ ತತ್ವಗಳ ವಿರುದ್ಧ ನಿರಂತರವಾಗಿ ಅಪಪ್ರಚಾರ, ದ್ವೇಷ ಬಿತ್ತಿಕೊಂಡು ಬಂದಿರುವ RSSನ ಕೂಸುಗಳು ಇಂದಿಗೂ ಗಾಂಧೀಜಿಯ ಮೇಲೆ ದಾಳಿ ನಡೆಸುತ್ತಿವೆ. ದೇಶದಲ್ಲಿ ಈಗ ಗಾಂಧಿ ಕೊಂದವರ ಆಡಳಿತವಿದೆ, ಜನತೆ ಎಚ್ಚರದಿಂದಿರಬೇಕು. ಆಧುನಿಕ ಜಗತ್ತಿನ ಮಹಾನ್ ದಾರ್ಶನಿಕ ಮಹಾತ್ಮ ಗಾಂಧಿಯವರನ್ನು ಕೇವಲ ಗೋಡ್ಸೆ ಒಬ್ಬ ಕೊಂದಿದ್ದಲ್ಲ, ಒಂದು ವಿಕ್ಷಪ್ತ ಸಿದ್ದಾಂತ ಕೊಂದಿದ್ದು, ಇಂದು ಅದೇ ಸಿದ್ದಾಂತದವರು ಆಡಳಿತದ ಚುಕ್ಕಾಣಿ ಹಿಡಿದಿದ್ದು ಗಾಂಧಿಯನ್ನು ಪ್ರತಿದಿನವೂ ಕೊಲ್ಲುತ್ತಿದ್ದಾರೆ ಎಂದು ಕಾಂಗ್ರೆಸ್ ಕುಟುಕಿದೆ.

Join Whatsapp