‘ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ಕಲಿಯಿರಿ’ – ವಿಶ್ವ ಹಿಂದೂ ಪರಿಷತ್ ಮುಖಂಡ ಬಹಿರಂಗ ಕರೆ

Prasthutha|

ಬೆಳಗಾವಿ: ಹಿಂದೂಗಳು ಕೇವಲ ಶಸ್ತ್ರಗಳನ್ನು ಶೇಖರಿಸಿಟ್ಟರೆ ಸಾಲದು. ಅದರ ಬಳಕೆಯ ಬಗ್ಗೆ ಕಲಿಯಬೇಕು ಎಂದು ಜಿಲ್ಲೆಯ ಶಾಸ್ತ್ರಿ ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಕಛೇರಿಯಲ್ಲಿ ನಡೆದ ಆಯುಧ ಪೂಜೆಯಲ್ಲಿ ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಸಹ ಕಾರ್ಯದರ್ಶಿ ಗೋಪಾಲ ನಾಗರಕಟ್ಟೆ ಬಹಿರಂಗವಾಗಿ ಕರೆ ನೀಡಿದ್ದಾರೆ.

- Advertisement -

‘ಹೋರಾಟಕ್ಕೆ, ಹೊಡೆದಾಟಕ್ಕೆ ಬಳಸುವಂತಹ ಶಸ್ತ್ರಾಸ್ತ್ರಗಳನ್ನು ‍‍‍ಪೂಜಿಸಿ ಹೊರತು ಚಾಕು, ಕತ್ತರಿಯಂಥ ಚಿಕ್ಕ ಮನೆಬಳಕೆ ವಸ್ತುಗಳನ್ನಲ್ಲ’ ಎಂದು ಹೇಳಿದ್ದಾರೆ.

‘ಸರಕಾರ, ಪೊಲೀಸ್, ಸೈನಿಕರಿಂದ ಮಾತ್ರ ಹಿಂದೂಗಳ ರಕ್ಷಣೆ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಪರಾಕ್ರಮಕ್ಕೆ ಸಿದ್ಧರಾಗಬೇಕು. ತಮ್ಮ ತಮ್ಮಲ್ಲಿರುವ ಆಯುಧಗಳನ್ನು ಹರಿತಗೊಳಿಸಿ, ಹೇಗೆ ಬಳಸಬೇಕೆಂಬುವುದನ್ನೂ ಕಲಿತಿರಬೇಕು’ ಎಂದಿದ್ದಾರೆ.

Join Whatsapp