ರಾಜ್ಯ ಸರಕಾರಿ ಬಸ್ ಟಿಕೆಟ್ ನಲ್ಲಿ ‘ಜೈ ಮಹಾರಾಷ್ಟ್ರ’ ಎಂದು ಉಲ್ಲೇಖ : ವ್ಯಾಪಕ ವಿರೋಧ

Prasthutha|

ಗದಗ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಯ ಬಸ್ ಟಿಕೆಟ್ ನಲ್ಲಿ ಜೈ ಮಹಾರಾಷ್ಟ್ರ, ಮಹಾರಾಷ್ಟ್ರ ರಾಜ್ಯ ಪರಿವಾಹನ ಎಂದು ಮುದ್ರಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಟಿಕೆಟ್ ಮಧ್ಯಭಾಗದಲ್ಲಿ ಮಹಾರಾಷ್ಟ್ರ ರಾಜ್ಯ ಪರಿವಾಹನ, ಜೈ ಮಹಾರಾಷ್ಟ್ರ ಎಂದು ಮುದ್ರಿಸಿದ್ದು ಮಾತ್ರವಲ್ಲ ಮಹಾರಾಷ್ಟ್ರ ಸರಕಾರದ ಲಾಂಛನದ ಚಿತ್ರವೂ ಮುದ್ರಿತಗೊಂಡಿದೆ.

 ಟಿಕೆಟ್ ನಲ್ಲಿ ರಾಜ್ಯ ಲಾಂಛನವಾಗಿರುವ ಗಂಡಭೇರುಂಡ ಲಾಂಛನ ಎಲ್ಲಿ ಮಾಯವಾಯಿತು? ಈ ಎಡವಟ್ಟು ಹೇಗೆ ಸಂಭವಿಸಿತು? ಎಂದು ಪ್ರಶ್ನಿಸಿ ಕೆಎಸ್ಆರ್ ಟಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯದ ಜನತೆ ಆಗ್ರಹಿಸಿದ್ದಾರೆ.

ಕನ್ನಡಪರ ಸಂಘಟನೆಗಳು ಈ ಬೆಳವಣಿಗೆಯ ವಿರುದ್ಧ ದಿಢೀರ್ ಪ್ರತಿಭಟನೆಗಿಳಿದಿವೆ. ನಗರದ ಹಳೆ ಬಸ್ ನಿಲ್ದಾಣದಲ್ಲಿ ಯಡವಟ್ಟು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Join Whatsapp