ಹಸು, ಎಮ್ಮೆಗಳ ಬಳಿಕ ಗೂಳಿಗೂ ಡಿಕ್ಕಿ ಹೊಡೆದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು

Prasthutha|

ಒಂದೇ ತಿಂಗಳಲ್ಲಿ 3 ಬಾರಿ ಜಾನುವಾರುಗಳಿಗೆ ಡಿಕ್ಕಿ, ಒಂದು ಬಾರಿ ಚಕ್ರ ಜಾಂ

- Advertisement -

ಗಾಂಧಿನಗರ : ಇತ್ತೀಚೆಗೆ ಜಾನುವಾರುಗಳಿಗೆ ಡಿಕ್ಕಿ ಹೊಡೆದು ಭಾರೀ ಸುದ್ದಿಯಾಗಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದೀಗ ಮತ್ತೆ ಜನಪ್ರಿಯವಾಗಿದೆ. ಹಸು, ಎಮ್ಮೆಗಳ ಬಳಿಕ ಇಂದು ಈ ರೈಲು ಗೂಳಿಗೂ ಡಿಕ್ಕಿ ಹೊಡೆದಿದೆ.

ಕಳೆದ ಒಂದು ತಿಂಗಳಲ್ಲಿ 3 ಬಾರಿ ಜಾನುವಾರುಗಳಿಗೆ ಡಿಕ್ಕಿ ಹೊಡೆದಿದೆ. ಒಂದೊಮ್ಮೆ ಹಸುವಿಗೆ ಡಿಕ್ಕಿ ಹೊಡೆದಿತ್ತು. ಅದಾದ ಬಳಿಕ ಎಮ್ಮೆಗಳ ಗುಂಪಿಗೆ ಡಿಕ್ಕಿ ಹೊಡೆದು, ರೈಲಿನ ಮುಂಭಾಗ ಜಖಂ ಆಗಿತ್ತು.ನಾಲ್ಕು ಎಮ್ಮೆಗಳೂ ಸತ್ತಿದ್ದವು. ಅದಾದ ಕೆಲವು ದಿನಗಳ ನಂತರ ರೈಲಿನ ಚಕ್ರ ಜಾಂ ಆಗಿ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಗೂಳಿಯೊಂದಕ್ಕೆ ಮತ್ತೆ ಡಿಕ್ಕಿ ಹೊಡೆದಿದೆ.

- Advertisement -

ಗುಜರಾತ್‌ನ ಗಾಂಧಿನಗರ- ಮುಂಬಯಿ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶನಿವಾರ ಬೆಳಿಗ್ಗೆ 8.17ರ ವೇಳೆಗೆ ಗುಜರಾತ್‌ನ ಅತುಲ್ ರೈಲ್ವೆ ನಿಲ್ದಾಣದ ಬಳಿ ಗೂಳಿಯೊಂದಕ್ಕೆ ಡಿಕ್ಕಿ ಹೊಡೆದು ಹದಿನೈದು ನಿಮಿಷಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.

ವಂದೇ ಭಾರತ್ ಸರಣಿಯ ಮೂರನೇ ಸೇವೆಯಾಗಿರುವ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ಚಾಲನೆ ನೀಡಿದ್ದರು.

Join Whatsapp