TRS ನಾಯಕರಿಗೆ ಬಿಜೆಪಿ ಸೇರಲು 100 ಕೋಟಿ ಆಮಿಷ ಪ್ರಕರಣ | ಅಮಿತ್ ಶಾ ಬಂಧಿಸುವಂತೆ ಮನೀಶ್ ಸಿಸೋಡಿಯಾ ಆಗ್ರಹ

Prasthutha|

ದೆಹಲಿ: ಟಿ ಆರ್ ಎಸ್ ಪಕ್ಷದ ನಾಯಕರಿಗೆ ಬಿಜೆಪಿ ಗೆ ಪಕ್ಷಾಂತರವಾಗಲು 100 ಕೋಟಿ ಆಮಿಷವೊಡ್ಡಿ ,ಖರೀದಿ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ಬಂಧಿಸಬೇಕೆಂದು ಎ ಎ ಪಿ ನಾಯಕ ಮನೀಶ್ ಸಿಸೋಡಿಯಾ ಆಗ್ರಹಿಸಿದ್ದಾರೆ.

- Advertisement -

ಬಿಜೆಪಿಯೇತರ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ‘ಆಪರೇಷನ್ ಕಮಲ’ ದ ಮೂಲಕ ಕೋಟಿ ಕೋಟಿ ಲಂಚ ನೀಡಿ , ಪ್ರಸ್ತುತ ಅಧಿಕಾರದಲ್ಲಿರುವ ಸರಕಾರವನ್ನು ಇಲ್ಲಗೊಳಿಸುವ ಈ ಕಾರ್ಯದಲ್ಲಿ ಅಮಿತ್ ಶಾ ನೇರ ಶಾಮೀಲಾಗಿದ್ದಾರೆ ಎಂದು ಸಿಸೋಡಿಯಾ ಹೇಳಿದ್ದಾರೆ

ಅದಲ್ಲದೆ ತೆಲಂಗಾಣದಲ್ಲಿ ನಡೆದ ಈ ಆಪರೇಶನ್ ಕಮಲದಲ್ಲಿ ಖರೀದಿ ಸಂಬಂಧಿತ ಆಡಿಯೋ ಕ್ಲಿಪ್ ನಲ್ಲಿ ‘ಶಾಹ್ ಜೀ’ ಎಂಬ ಉಲ್ಲೇಖವಿದೆ. ಈ ಕುರಿತು ಹೆಚ್ಚುವರಿ ತನಿಖೆ ನಡೆಯಬೇಕು. ಈ ಮೇಲಿನ ‘ಶಾಹ್ ಜೀ’ ಅಮಿತ್ ಶಾ ಅವರಾಗಿದ್ದರೆ ಕೂಡಲೇ ಅವರನ್ನು ಬಂಧಿಸಿ, ಜೈಲಿಗಟ್ಟಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

Join Whatsapp