ಉತ್ತರ ಪ್ರದೇಶ: ಪೊಲೀಸ್ ಕಸ್ಟಡಿಯಲ್ಲಿ ಆರೋಪಿಯ ಅನುಮಾನಾಸ್ಪದ ಸಾವು !

Prasthutha|

ಬಿಜ್ನೋರ್: ಕಳ್ಳತನದ ಆರೋಪದಲ್ಲಿ ಪೊಲೀಸರ ವಶದಲ್ಲಿದ್ದ 32 ವರ್ಷದ ವ್ಯಕ್ತಿಯೊಬ್ಬರು ಕಸ್ಟಡಿಯಲ್ಲಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಎಂಬಲ್ಲಿನ ನಝಿಬಾಬಾದ್ ನಲ್ಲಿ ನಡೆದಿದೆ.

- Advertisement -

ಸುನಿಲ್ ಪ್ರಜಾಪತಿ ಎಂಬುವವರು ಮೃತಪಟ್ಟ ವ್ಯಕ್ತಿಯಾಗಿದ್ದು, ಕಳ್ಳತನದ ಆರೋಪ ಹೊರಿಸಿ ಕಳೆದ ಶುಕ್ರವಾರ ಆತನನ್ನು ಬಂಧಿಸಿದ ಪೊಲೀಸರು ಚಿತ್ರಹಿಂಸೆ ನೀಡಿದ್ದರು ಎಂದು ಕುಟುಂಬದ ಮೂಲಗಳು ಆರೋಪಿಸಿವೆ.

ಕುಟುಂಬದ ಆರೋಪವನ್ನು ನಿರಾಕರಿಸಿದ ಪೊಲೀಸ್ ವರಿಷ್ಠಾಧಿಕಾರಿ ಧರಂವೀರ್ ಸಿಂಗ್, ಮೃತ ಸುನಿಲ್ ಅತಿಯಾದ ಕುಡಿತ ಮತ್ತು ಅತಿಯಾದ ಡ್ರಗ್ಸ್ ಸೇವನೆಯಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

- Advertisement -

ಬಂಧನದ ವೇಳೆ ಅತಿಯಾಗಿ ಕುಡಿದಿದ್ದ ಪ್ರಜಾಪತಿಯ ಜೇಬಿನಲ್ಲಿ ಅಮಲೇರುವ ಮಾತ್ರೆಗಳು ಪತ್ತೆಯಾಗಿದ್ದವು. ಮೃತನ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮದ ಮುಖಂಡ ಪ್ರದೀಪ್ ಕುಮಾರ್ ಎಂಬವರ ಮನೆಯಲ್ಲಿದ್ದ ಗೋಧಿ ಚೀಲಗಳನ್ನು ಕದ್ದ ಆರೋಪದಲ್ಲಿ ಸುನೀಲ್ ಪ್ರಜಾಪತಿಯನ್ನು ಬಂಧಿಸಲಾಗಿತ್ತು.

Join Whatsapp