ಉತ್ತರ ಪ್ರದೇಶ | ಮೇಲ್ಜಾತಿಯವರಿಂದ ದಲಿತನ ಗುಂಪುಹತ್ಯೆ

Prasthutha|

ಲಖನೌ: ದಲಿತ ಸಮುದಾಯಕ್ಕೆ ಸೇರಿದ ಯುವಕ ಮತ್ತು ಆತನ ಕುಟುಂಬದ ಸದಸ್ಯರು ಜಾನುವಾರುಗಳಿಗೆ ಮೇವು ನೀಡುತ್ತಿದ್ದಾಗ ಮೇಲ್ಜಾತಿ ಯುವಕರ ಗುಂಪೊಂದು ದಲಿತನನ್ನು ಥಳಿಸಿ ಗುಂಪುಹತ್ಯೆ ನಡೆಸಿದ ಘಟನೆ ಉತ್ತರ ಪ್ರದೇಶದ ಫಿರೋಝಾಬಾದ್ ಎಂಬಲ್ಲಿ ನಡೆದಿದೆ.

- Advertisement -

ಜೈ ಸಿಂಗ್ ಎಂಬಾತನೇ ಸಾವನ್ನಪ್ಪಿದವರಾಗಿದ್ದು, ತಲೆಗೆ ಗಂಭೀರವಾಗಿ ಗಾಯವಾದ ಹಿನ್ನೆಲೆಯಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆಯ ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಖಿಲೇಶ್ ನಾರಾಯಣ್, ಇದಕ್ಕೆ ಸಂಬಂಧಿಸಿದಂತೆ ಮೂವರು ಅಪರಿಚಿತ ವ್ಯಕ್ತಿಗಳು ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯ ಕುರಿತು ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

- Advertisement -

ಓಂವೀರ್, ಅವದೇಶ್ ಮತ್ತು ಧರ್ಮವೀರ್ ಸಿಂಗ್ ಎಂಬವರು 2021 ರಲ್ಲಿ ಸ್ಥಳೀಯ ನಿವಾಸಿಯಿಂದ ಖರೀದಿಸಿದ ನಿವೇಶನವನ್ನು ಖಾಲಿ ಮಾಡುವಂತೆ ಜೈ ಅವರ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಮೃತರ ಸಹೋದರ ಓಂಪಾಲ್ ಆರೋಪಿಸಿದ್ದಾರೆ.

ಅವರು ನಮ್ಮ ಭೂಮಿಯನ್ನು ಕಬಳಿಸಲು ಯತ್ನಿಸುತ್ತಿದ್ದು, ಫೆಬ್ರವರಿಯಲ್ಲಿ ನಿವೇಶನವನ್ನು ಬಿಟ್ಟುಕೊಡದಿದ್ದರೆ ನನ್ನ ತಂದೆಗೆ ಬೆದರಿಕೆ ಹಾಕಿದ್ದರು. ಘಟನೆಯ ಬಗ್ಗೆ ನಾವು ಪೊಲೀಸರಿಗೆ ದೂರು ನೀಡಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮೃತರ ಪುತ್ರಿ ಸೋನಮ್ ಮಾಹಿತಿ ನೀಡಿದ್ದಾರೆ.

Join Whatsapp