ಡಿಸೆಂಬರ್ 23ರಿಂದ ಉಳ್ಳಾಲ ಸೈಯದ್ ಮದನಿ ದರ್ಗಾ ಶರೀಫ್ ಉರೂಸ್

Prasthutha|

ಮಂಗಳೂರು: ಹಜರತ್ ಸೈಯದ್ ಮದನಿ ದರ್ಗಾ ಶರೀಫ್ ಉಳ್ಳಾಲ ಇದರ 2021ರ ಉರೂಸ್ ಸಮಾರಂಭ ಡಿಸೆಂಬರ್ 23ರಿಂದ 2022ರ ಜನವರಿ 16 ರವರೆಗೆ ನಡೆಯಲಿದೆ. ದಕ್ಷಿಣ ಭಾರತದ ಅಜ್ಮೀರ್ ಎಂದೇ ಸುಪ್ರಸಿದ್ಧವಾದ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಙಳರ 21ನೇ ಪಂಚ ವಾರ್ಷಿಕ ಉರೂಸಿಗೆ ಧ್ವಜಾರೋಹಣ ಮೂಲಕ ಶುಕ್ರವಾರ ಅದ್ದೂರಿಯ ಚಾಲನೆ ನೀಡಲಾಯಿತು.

- Advertisement -

ಸಯ್ಯಿದ್ ಇಂಬಿಚ್ಚಿಕೋಯ ತಂಙ್ಙಳ್, ಸಯ್ಯಿದ್ ಮದನಿ ಅರಬಿಕ್ ಕಾಲೇಜು ಪ್ರಾಂಶುಪಾಲರಾದ ಶೈಖುನಾ ತೋಡಾರು ಉಸ್ತಾದ್, ಮುದರ್ರಿಸರಾದ ಇಬ್ರಾಹಿಂ ಮದನಿ ಕಿನ್ಯ, ಇಬ್ರಾಹಿಂ ಅಹ್ಸನಿ ಮಾಜಿ ಖತೀಬರಾದ ಅಬ್ದುರ್ರವೂಫ್ ಮುಸ್ಲಿಯಾರ್, ಖತೀಬರಾದ ಅನ್ವರ್ ಅಲಿ ದಾರಿಮಿ, ದರ್ಗಾ ಸಮಿತಿ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್, ಕಾರ್ಯದರ್ಶಿ ತ್ವಾಹಾ ಹಾಜಿ, ಉಪಾಧ್ಯಕ್ಷರಾದ ಬಾವಾಕ, ನೌಷಾದ್,ಮುಸ್ತಫಾ ಅಬ್ದುಲ್ಲಾ, ಅರೇಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ,ಹಮೀದ್ ಕೋಡಿ, ಅಲಿ ಮೋನು,ಇತರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Join Whatsapp