ಬಿ.ಕೆ.ಹರಿಪ್ರಸಾದ್ ವಿರುದ್ಧ ಮಾತ್ರ ಹೇಳಿಕೆ ನೀಡಿದ್ದು, ಇಡೀ ಕಾಂಗ್ರೆಸ್ಸಿಗಲ್ಲ: ಉಲ್ಟಾ ಹೊಡೆದ ಈಶ್ವರಪ್ಪ

Prasthutha|

ಶಿವಮೊಗ್ಗ: ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಮಾತ್ರ ಬೈದಿದ್ದೇನೆಯೇ ಹೊರತು, ಇಡೀ ಕಾಂಗ್ರೆಸಿಗರಿಗೆ ಅಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಉಲ್ಟಾ ಹೊಡೆದಿದ್ದಾರೆ.

- Advertisement -

ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಸುಲಭ್ ಶೌಚಾಲಯಕ್ಕೆ ಮೋದಿ ಹೆಸರು ಇಡಬೇಕೆಂದು ಹೇಳಿರುವುದು ಎಷ್ಟು ಸರಿ? ಹರಿಪ್ರಸಾದ್ ವಿರುದ್ಧ ಕಾಂಗ್ರೆಸ್ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ವಿರುದ್ಧ ಹರಿಪ್ರಸಾದ್ ಮಾತನಾಡಿದ್ದಕ್ಕೆ ಸಿಟ್ಟಿನಲ್ಲಿ ಆ ಪದ ಬಳಕೆ ಮಾಡಿದೆ. ನಾನು ತಕ್ಷಣವೇ ಕ್ಷಮೆ ಕೇಳಿದ್ದೇನೆ. ತಪ್ಪು ಎಂದು ಒಪ್ಪಿಕೊಂಡಿದ್ದೇನೆ ಎಂದು ಈಶ್ವರಪ್ಪ ಹೇಳಿದರು.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸಿಗರನ್ನು ನಾನು ಇವತ್ತೂ ಗೌರವಿಸುತ್ತೇನೆ. ಅನೇಕ ಆರ್ಎಸ್ಎಸ್ ಮುಖಂಡರು ಕಾಂಗ್ರೆಸ್ ಪಕ್ಷದಲ್ಲೇ ಇದ್ದವರು. ಆದರೆ, ಅಂದಿನ ಕಾಂಗ್ರೆಸ್ ಬೇರೆ, ಇಂದಿನ ಕಾಂಗ್ರೆಸ್ ಬೇರೆ’ ಎಂದು ಹೇಳಿದರು.

Join Whatsapp