ಉಳ್ಳಾಲ ಸ್ಥಾಯಿ ಸಮಿತಿ ಅಧ್ಯಕ್ಷೆ ಝರೀನ ರವೂಫ್ ನೇತೃತ್ವದಲ್ಲಿ ಉಳ್ಳಾಲ ಚಂಡಮಾರುತದಿಂದ ಹಾನಿಗೊಳಗಾದ ಮನೆಗಳ ಪರಿಶೀಲನೆ

Prasthutha|

ಉಳ್ಳಾಲ : ಕರಾವಳಿಯಾದ್ಯಾಂತ ಅಬ್ಬರಿಸಿದ ತೌಕ್ತೆ ಚಂಡಮಾರುತದಿಂದ ಉಳ್ಳಾಲದ ಕೋಟೇಪುರ, ಕೋಡಿ, ಮೊಗವೀರಪಟ್ಣ, ಮುಕ್ಕಚೇರಿ ಪ್ರದೇಶದಲ್ಲಿ ತೀವ್ರ ರೀತಿಯ ಕಡಲ್ಕೊರೆತದಿಂದಾಗಿ ಹಲವಾರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಉಳ್ಳಾಲ ನಗರಸಭೆಯ ಸ್ಥಾಯಿಸಮಿತಿ ಅಧ್ಯಕ್ಷೆ  ಶ್ರೀಮತಿ ಝರೀನಾ ರೌಫ್ ನೇತೃತ್ವದಲ್ಲಿ ಎಸ್ಡಿಪಿಐ ಕೌನ್ಸಿಲರ್ ಗಳ ನಿಯೋಗ ಸ್ಥಳಕ್ಕೆ ಭೇಟಿಯಾಗಿ ಪರಿಶೀಲನೆ ನಡೆಸಿತು.

- Advertisement -

ಅನಂತರ ನಗರಸಭಾ ಕಮಿಷನರ್ ರಾಯಪ್ಪ ರವರನ್ನು ಭೇಟಿಯಾಗಿ ಹಾನಿಗೊಳಗಾದ ಮನೆಗಳಿಗೆ ತಕ್ಷಣ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು ಹಾಗೆಯೇ ಈ ಬಗ್ಗೆ ಜಿಲ್ಲಾಧಿಕಾರಿಗಳು ತಕ್ಷಣ ಸ್ಪಂದಿಸುವಂತೆ ಆಗ್ರಹಿಸಿತು.

ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ  ಕೌನ್ಸಿಲರ್ ಗಳಾದ ಶಹನಾಜ್ ಅಕ್ರಮ್ ಹಸನ್, ರುಕಿಯಾ ಇಕ್ಬಾಲ್, ರಮೀಜ್ ಕೋಡಿ, ಎಸ್.ಡಿ. ಪಿ.ಐ ನಗರ ಸಮಿತಿ ಅಧ್ಯಕ್ಷ ಅಬ್ಬಾಸ್ ಎ. ಆರ್, ರೌಫ್ ಉಳ್ಳಾಲ, ಬದ್ರುದ್ದೀನ್ ಉಳ್ಳಾಲ, ನಿಝಾಮ್ ಮೇಲಂಗಡಿ, ಅಕ್ರಮ್ ಹಸನ್, ರಝೀನ್ ಮೇಲಂಗಡಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

Join Whatsapp