ಉಡುಪಿ: ಕವರ್ ಸಮೇತ ಚಾಕಲೇಟ್ ತಿಂದ ವಿದ್ಯಾರ್ಥಿನಿ ಉಸಿರುಗಟ್ಟಿ ಮೃತ್ಯು!

Prasthutha|

ಕುಂದಾಪುರ: ಪ್ಲಾಸ್ಟಿಕ್ ಕವರ್ ಸಹಿತ ಚಾಕಲೇಟನ್ನು ನುಂಗಿದ 2ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಬಿಜೂರು ಬಳಿಯ ಬಳವಾಡಿ ಬಳಿ ನಡೆದಿದೆ.

- Advertisement -

ಬಳವಾಡಿ ಗ್ರಾಮದ ಎರಡನೇ ತರಗತಿ ವಿದ್ಯಾರ್ಥಿನಿ ಸಮನ್ವಿ (7) ಮೃತ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.

ಸಮನ್ವಿ ಉಪ್ಪುಂದದ ಶ್ರೀ ವಿವೇಕಾನಂದ ಆಂಗ್ಲಮಾಧ್ಯಮ 2ನೇ ತರಗತಿ ಕಲಿಯುತ್ತಿದ್ದು, ಇಂದು ಬೆಳಗ್ಗೆ ಶಾಲೆಗೆ ಹೊರಡುವಾಗ ಹಠ ಹಿಡಿದಿದ್ದಾಳೆ ಎನ್ನಲಾಗಿದೆ. ಮಗಳನ್ನು ಸಮಾಧಾನ ಪಡಿಸಿದ ತಾಯಿ ಚಾಕಲೇಟ್ ನೀಡಿದ್ದಾರೆ. ಈ ವೇಳೆ ಶಾಲಾ ವಾಹನ ಬಂದಿದ್ದು, ಆತುರಾತುರವಾಗಿ ವಿದ್ಯಾರ್ಥಿನಿ ಕವರ್ ಸಮೇತ ಚಾಕಲೇಟ್ ನುಂಗಿದ್ದಾಳೆ ಎಂದು ತಿಳಿದು ಬಂದಿದೆ.
ಆದರೆ ಶಾಲಾ ವಾಹನ ಹತ್ತಿದ ವಿದ್ಯಾರ್ಥಿನಿ ಮಾರ್ಗ ಮಧ್ಯೆ ಚಾಕಲೇಟ್ ಗಂಟಲಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದು, ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.. ಆದರೆ, ಆ ವೇಳೆಗಾಗಲೇ ಬಾಲಕಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.

- Advertisement -

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp