ಪಶ್ಚಿಮ ಬಂಗಾಳ : TMC ಕಾರ್ಯಕರ್ತನ ಗುಂಡಿಕ್ಕಿ ಹತ್ಯೆ

Prasthutha|

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್(TMC) ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

- Advertisement -

ಜಿಯಾರುಲ್ ಮೊಲ್ಲಾ ಎಂಬ ಕಾರ್ಯಕರ್ತ ಬಸಂತಿ ಗ್ರಾಮದ ರಸ್ತೆಯೊಂದರಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜಿಯಾರುಲ್ ಮೊಲ್ಲಾ ಅವರು ಯುವ ತೃಣಮೂಲ ಕಾಂಗ್ರೆಸ್ ಸದಸ್ಯನಾಗಿದ್ದು, ಅವರಿಗೆ ನಿರಂತರ ಜೀವ ಬೆದರಿಕೆ ಇತ್ತು ಎಂದು ಕುಟುಂಬ ಹೇಳಿದೆ.

- Advertisement -

“ನನ್ನ ತಂದೆಗೆ ಸಾಕಷ್ಟು ಶತ್ರುಗಳಿದ್ದರು, ಅವರಿಗೆ ರಾಜಕೀಯ ದ್ವೇಷವಿತ್ತು, ಅವರಿಗೆ ಹಲವಾರು ಬಾರಿ ಬೆದರಿಕೆ ಇತ್ತು, ಅವರಿಗೆ ವಿವಿಧ ಸಂಖ್ಯೆಗಳಿಂದ ಫೋನ್ ಮೂಲಕ ಬೆದರಿಕೆ ಕರೆಗಳು ಬರುತ್ತಿದ್ದವು, ನನ್ನ ತಂದೆ ಅವರು ಟಿಎಂಸಿ ಯುವ ಘಟಕದ ಸದಸ್ಯರಾಗಿದ್ದರು” ಎಂದು ಮೊಲ್ಲಾ ಅವರ ಮಗ ತಿಳಿಸಿದ್ದಾರೆ. ಈ ವಿಚಾರದಲ್ಲಿ ತನಿಖೆ ನಡೆಯುತ್ತಿದೆ.

Join Whatsapp