ವಲಸೆ ಕಾರ್ಮಿಕರಿಗೆ ರೈಲು ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

Prasthutha|

ಒಡಿಶಾ: ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ವಲಸೆ ಕಾರ್ಮಿಕರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟು, ಉಳಿದವರು ಗಾಯಗೊಂಡ ಘಟನೆ ಒಡಿಶಾದ ಗಂಜಮ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಸುಮಾರು 7-8 ವಲಸೆ ಕಾರ್ಮಿಕರು ಭಾನುವಾರ ರಾತ್ರಿ ಬ್ರಹ್ಮಾಪುರ ರೈಲ್ವೆ ಸ್ಟೇಶನ್ ಗೆ ಹೋಗುತ್ತಿದ್ದರು. ಇವರೆಲ್ಲ ಹಳಿಯ ಮೇಲೇ ನಡೆದುಕೊಂಡು ಹೋಗುತ್ತಿದ್ದು, ಅದೇ ಸಮಯದಲ್ಲಿ ಬಂದ ವಿಶಾಖಪಟ್ಟಣಂ-ಟಾಟಾನಗರ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ.
ಇವರೆಲ್ಲ ಬಿಹಾರ ಮೂಲದ ಕಾರ್ಮಿಕರಾಗಿದ್ದು, ಮನೆಗೆ ಹೋಗುವ ಸಲುವಾಗಿ ರೈಲ್ವೆ ನಿಲ್ದಾಣಕ್ಕೆ ತೆರಳುತ್ತಿದ್ದರು ಎಂದು ರೈಲ್ವೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Join Whatsapp