ಜ.26ರಂದು ದೆಹಲಿಯತ್ತ ರೈತರ ‘ಟ್ರಾಕ್ಟರ್ ಪರೇಡ್’

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿಗಳನ್ನು ವಿರೋಧಿಸಿ ಕಳೆದ 38 ದಿನಗಳಿಂದ ಕೊರೆವ ಚಳಿಯನ್ನೂ ಲೆಕ್ಕಿಸದೆ, ಹೆದ್ದಾರಿಗಳಲ್ಲೇ ರಾತ್ರಿ-ಹಗಲು ಉಳಿದು ಪ್ರತಿಭಟನೆ ನಿರತರಾಗಿರುವ ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಮುಂದಾಗಿದ್ದಾರೆ.

- Advertisement -

ಜ.26ರ ಗಣರಾಜ್ಯೋತ್ಸವದ ದಿನದ ಮೊದಲು ತಮ್ಮ ಬೇಡಿಕೆ ಈಡೇರದಿದ್ದರೆ, ಅಂದು ದೆಹಲಿಯತ್ತ ‘ಟ್ರಾಕ್ಟರ್ ಪರೇಡ್’ ನಡೆಸುವುದಾಗಿ ರೈತ ಮುಖಂಡರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರಧ್ವಜದೊಂದಿಗೆ ಈ ಪರೇಡ್ ನಡೆಯಲಿದೆ. ಇದನ್ನು ರೈತ ಪರೇಡ್ ಎಂದು ಕರೆಯಲಾಗುವುದು ಎಂದು ರೈತ ಮುಖಂಡ ದರ್ಶನ್ ಪಾಲ್ ಹೇಳಿದ್ದಾರೆ. ಜ.26ರಂದು ಗಣರಾಜ್ಯೊತ್ಸವದಂದು ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್ ನಡೆಯುತ್ತದೆ. ಈ ವೇಳೆ ಪ್ರತಿಭಟನಾತ್ಮಕವಾಗಿ ಟ್ರಾಕ್ಟರ್ ಪರೇಡ್ ನಡೆಸಲು ರೈತ ನಾಯಕರು ನಿರ್ಧರಿಸಿದ್ದಾರೆ.   

Join Whatsapp