ತಿಹಾರ್‌ ಜೈಲಿನಲ್ಲಿ ಖೈದಿಗಳಿಗೆ ಲೈಂಗಿಕ ಬಯಕೆ ತೀರಿಸಿಕೊಳ್ಳುವ ವ್ಯವಸ್ಥೆ ಇದೆ: ಮಾಜಿ ಕಾನೂನು ಅಧಿಕಾರಿ ಸುನೀಲ್‌ ಗುಪ್ತಾ

Prasthutha|

ನವದೆಹಲಿ: ತಿಹಾರ್‌ ಜೈಲಿನಲ್ಲಿ ಬಂಧನದಲ್ಲಿರುವ ಪ್ರಭಾವೀ ವ್ಯಕ್ತಿಗಳಿಗೆ ಲೈಂಗಿಕ ಬಯಕೆ ತೀರಿಸಿಕೊಳ್ಳಲು ಕೂಡ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಈ ಬಗ್ಗೆ ತನಗೆ ಗೊತ್ತಿದೆ ಎಂದು ಜೈಲಿನ ಮಾಜಿ ಕಾನೂನು ಅಧಿಕಾರಿ ಸುನೀಲ್‌ ಗುಪ್ತಾ ಗಂಭೀರ ಆರೋಪ ಮಾಡಿದ್ದಾರೆ.

- Advertisement -

ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್‌ ಅವರು ಜೈಲಿನೊಳಗೆ ಮಸಾಜ್‌ ಮಾಡಿಸಿಕೊಳ್ಳುತ್ತಿರುವ ಸಿಸಿಟಿವಿ ವೀಡಿಯೋ ಬಗ್ಗೆ ಗುಪ್ತಾ ಪ್ರತಿಕ್ರಿಯಿಸುತ್ತಾ ಹೀಗೆ ಹೇಳಿದ್ದಾರೆ.


ರಾಷ್ಟ್ರದ ಅತಿದೊಡ್ಡ ಜೈಲು ಎಂದು ಗುರುತಿಸಿಕೊಂಡಿರುವ ತಿಹಾರ್‌ ಜೈಲಿನಲ್ಲಿ ಸುನೀಲ್‌ ಗುಪ್ತಾ ಅವರು 1981 ರಿಂದ 2016ರ ವರೆಗೆ ಕಾನೂನು ಅಧಿಕಾರಿ ಮತ್ತು ವಕ್ತಾರರಾಗಿ ಕೆಲಸ ಮಾಡಿದ್ದಾರೆ. ನಿವೃತ್ತಿಯಾದ ಬಳಿಕ ಅವರು ಬರೆದ ‘ಬ್ಲ್ಯಾಕ್‌ ವಾರೆಂಟ್‌’ ಎಂಬ ಹೆಸರಿನ ಪುಸ್ತಕವದಲ್ಲಿ ಪ್ರಭಾವೀ ಕೈದಿಗಳು ಜೈಲಿನೊಳಗೆ ಕಾನೂನು ಮುರಿದು ಹೇಗೆ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂಬ ಬಗ್ಗೆ ವಿವರಿಸಿದ್ದಾರೆ.

- Advertisement -

ಬಂಧಿತ ಪ್ರಭಾವೀ ವ್ಯಕ್ತಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳು ಮತ್ತು ವಿಶೇಷ ಉಪಚಾರಗಳು ಜೈಲಿನ ಆವರಣದಲ್ಲೇ ಸಿಗುತ್ತವೆ. ಇಂತಹ ಕೃತ್ಯಗಳಲ್ಲಿ ಜೈಲಿನ ಅಧಿಕಾರಿಗಳು ಮತ್ತು ಸಹ ಖೈದಿಗಳು ಭಾಗಿಯಾಗುತ್ತಾರೆ. ನನ್ನ ಅಧಿಕಾರ ಅವಧಿಯಲ್ಲಿ, ಪ್ರಭಾವಿ ವ್ಯಕ್ತಿಗಳು ಲೈಂಗಿಕ ಬಯಕೆಗಳನ್ನು ಪೂರೈಸುವಂತೆ ಬೇಡಿಕೆ ಇಡುತ್ತಿದ್ದುದನ್ನು ನೋಡಿದ್ದೇನೆ. ತಮ್ಮ ತೀಟೆ ತೀರಿಸಿಕೊಳ್ಳಲು ಸಣ್ಣ ಪ್ರಾಯದ ಖೈದಿಗಳನ್ನು ಬಳಸಿಕೊಳ್ಳುವುದನ್ನು ಕೂಡ ಗಮನಿಸಿದ್ದೇನೆ. ಸಹಕೈದಿಗಳೊಂದಿಗೆ ಸಹಮತದಿಂದ ಅಥವಾ ಜೈಲಿನ ಅಧಿಕಾರಿಗಳ ಸಹಾಯದಿಂದ ಲೈಂಗಿಕ ಬಯಕೆಗಳನ್ನು ತೀರಿಸಿಕೊಳ್ಳುತ್ತಾರೆ. ಹೀಗೆಂದು ಗುಪ್ತಾ ಹೇಳಿದ್ದಾರೆ.

ಗುಪ್ತಾ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ತಿಹಾರ್‌ ಜೈಲಿನ ಹಾಲಿ ವಕ್ತಾರ ಧೀರಜ್‌ ಮಥುರ್‌ ನಿರಾಕರಿಸಿದ್ದಾರೆ.
ಸಣ್ಣ ವಯಸ್ಸಿನ ಕೈದಿಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ವಿಚಾರವಾಗಿ ಸಂಜಯ್‌ ಸೂರಿ ಮತ್ತು ದೆಹಲಿ ಆಡಳಿತದ ನಡುವೆ ಕಾನೂನು ಹೋರಾಟಕ್ಕೆ ಸಂಬಂಧಿಸಿ 1987ರಲ್ಲಿ ಸುಪ್ರೀಂ ಕೋರ್ಟ್‌ ಗಮನಾರ್ಹ ತೀರ್ಪು ನೀಡಿತ್ತು.

Join Whatsapp