ಜೊಲ್ಲೆ ಜಾಹೀರಾತಿನಲ್ಲಿ ಯಡಿಯೂರಪ್ಪ ಮಾಯ!

Prasthutha|

ಬೆಂಗಳೂರು: ಇಂಡಿಯನ್ ಎಕ್ಸ್’ಪ್ರೆಸ್ ದೆಹಲಿ ಆವೃತ್ತಿಯಲ್ಲಿ ಯಡಿಯೂರಪ್ಪ ಸಂಪುಟದ ಸಚಿವೆ ಶಶಿಕಲಾ ಜೊಲ್ಲೆ ಅವರು ವೈಯಕ್ತಿಕ ಜಾಹೀರಾತೊಂದನ್ನು ನೀಡಿದ್ದು, ಪತ್ರಿಕೆಯ ಇಡೀ ಪುಟದಲ್ಲಿ ಬಿಜೆಪಿ ನಾಯಕರ ಫೋಟೋಗಳಿದ್ದರೂ ಯಡಿಯೂರಪ್ಪ ಅವರ ಫೋಟೋ ಇಲ್ಲದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.   

- Advertisement -

ಪತ್ರಿಕೆಯಲ್ಲಿ ಸಹಕಾರ ಖಾತೆ ಸೃಷ್ಟಿಸಿದ ಪ್ರಧಾನಿ ನರೇಂದ್ರ ಮೋದಿಗೆ ವಂದನೆಗಳನ್ನು ತಿಳಿಸಿದ ಶಶಿಕಲಾ ಜೊಲ್ಲೆ, ಸಹಕಾರ ಸಚಿವ ಸ್ಥಾನ ಪಡೆದ ಅಮಿತ್​ ಶಾ ಅವರನ್ನು ಅಭಿನಂದಿಸಿದ್ದಾರೆ. ಜೊತೆಗೆ ಕರ್ನಾಟಕಕ್ಕೆ 6 ಸಚಿವ ಸ್ಥಾನಗಳನ್ನು ದಯಪಾಲಿಸಿ, ರಾಜ್ಯಕ್ಕೆ ಗರಿಷ್ಠ ಸ್ಥಾನಮಾನ ನೀಡಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ನಡುವೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರ ಫೋಟೋ ಶಶಿಕಲಾ ಬ್ಯಾನರ್ ನಲ್ಲಿ ಹಾಕದೆ ಯಾಕೆ ಕಡೆಗಣಿಸಿದ್ದಾರೆ ಎಂಬುದು ದೇಶದಾದ್ಯಂತ ಚರ್ಚೆಯ ವಿಷಯವಾಗಿದೆ.

Join Whatsapp