ರಾಜಸ್ಥಾನ: ಸಂಘಪರಿವಾರದಿಂದ ಅಜ್ಮೀರ ದರ್ಗಾ ಮುಂಭಾಗ ರ‍್ಯಾಲಿ, ಪ್ರಚೋದನಾಕಾರಿ ಘೋಷಣೆ

Prasthutha|

ಅಜ್ಮೀರ್: ಇತಿಹಾಸ ಪ್ರಸಿದ್ಧ ಅಜ್ಮೀರ್ ಖ್ವಾಜಾ ಮುಹಿಯುದ್ದೀನ್ ಚಿಸ್ತಿ ದರ್ಗಾ ಮುಂಭಾಗದಲ್ಲಿ ಸಂಘಪರಿವಾರ ಕಾರ್ಯಕರ್ತರು ಬೈಕ್ ರ‍್ಯಾಲಿಯ ಮೂಲಕ ಪ್ರಚೋದನಾಕಾರಿ ಘೋಷನೆಯನ್ನು ಕೂಗಿ ಸ್ಥಳದಲ್ಲಿ ಸಂಘರ್ಷದ ಪರಿಸ್ಥಿತಿ ನಿರ್ಮಿಸಿರುವ ಘಟನೆ ರಾಜಸ್ಥಾನದ ಅಜ್ಮೀರ್ ನಿಂದ ವರದಿಯಾಗಿದೆ.

- Advertisement -

ರಾಜಸ್ಥಾನ ಅಸೆಂಬ್ಲಿ ಚುನಾವಣೆಗೆ ಕೇವಲ 18 ತಿಂಗಳು ಬಾಕಿ ಇರುವಾಗ ಬಿಜೆಪಿ ಚುನಾವಣೆಯನ್ನು ಗೆಲ್ಲುವ ಸಲುವಾಗಿ ಸಂಘಪರಿವಾರವು ಹಿಂದೂ – ಮುಸ್ಲಿಮರ ನಡುವೆ ಗಲಭೆ ಸೃಷ್ಟಿಸುವ ಕಾರ್ಯಕ್ಕೆ ಕೈ ಹಾಕಿದೆ ಎಂದು ಹೇಳಲಾಗಿದೆ.

ಸದ್ಯ ಇತಿಹಾಸ ಪ್ರಸಿದ್ಧ ಅಜ್ಮೀರ್ ದರ್ಗಾದ ಮುಂಭಾಗದಲ್ಲಿ ಸಂಘಪರಿವಾರದ ಕಾರ್ಯಕರ್ತರು ರ‍್ಯಾಲಿ, ಪ್ರಚೋದನಾಕಾರಿ ಘೋಷಣೆ ಕೂಗುವ ಮೂಲಕ ಮುಸ್ಲಿಮರನ್ನು ಕೆರಳಿಸಲು ಮುಂದಾಗಿದ್ದಾರೆ. ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.

Join Whatsapp