ಕಮರಿಗೆ ಉರುಳಿದ ಕಾರು; ಒಂದೇ ಕುಟುಂಬದ ನಾಲ್ವರು ಸಾವು

Prasthutha|

ಬನಿಹಾಲ್: ಕಾರೊಂದು ಆಳದ ಕಮರಿಗೆ ಉರುಳಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಉಧಮ್ ಪುರ್ ಜಿಲ್ಲೆಯ ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

- Advertisement -


ರಂಬನ್ ಜಿಲ್ಲೆಯ ಗೂಲ್ ಸಂಗಲ್ದಾನ್ ಗ್ರಾಮದ ಜಾಮಿಯಾ ಮಸೀದಿಯ ಇಮಾಮ್ ಹಾಗೂ ಅವರ ಕುಟುಂಬವು ಜಮ್ಮುವಿಗೆ ತೆರಳುತ್ತಿದ್ದ ವೇಳೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕಿಡ್ ಆದ ಕಾರು 700 ಅಡಿ ಕಮರಿಗೆ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಸಂಗಲ್ದಾನ್ ಜಾಮಿಯಾ ಮಸೀದಿಯ ಮುಫ್ತಿ ಅಬ್ದಲ್ ಹಮೀದ್(32), ಅವರ ತಂದೆ ಮುಫ್ತಿ ಜಮಾಲುದ್ದೀನ್(65) ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿ ಹಜರಾ ಬೇಗಂ(60), ಸೋದರ ಸಂಬಂಧಿ ಆದಿಲ್ ಗುಲ್ಜಾರ್(16) ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

Join Whatsapp