ಮಂಗಳೂರು | ಕುಡಿದ ಮತ್ತಿನಲ್ಲಿ ಪತ್ನಿಯ ಕೊಲೆ: ಪತಿಯ ಬಂಧನ

Prasthutha|

ಮಂಗಳೂರು: ಪತಿ ತನ್ನ ಪತ್ನಿಯನ್ನು ಕುಡಿದ ಮತ್ತಿನಲ್ಲಿ ಕೊಲೆ ಮಾಡಿದ ಘಟನೆ ಮಂಗಳೂರಿನ ಬಜಪೆ ಬಳಿಯ ತೆಂಕ ಎಕ್ಕಾರು ಗ್ರಾಮದಲ್ಲಿ ನಡೆದಿದೆ.

- Advertisement -


ತೆಂಕ ಎಕ್ಕಾರು ಗ್ರಾಮದ ಪಲ್ಲದಕೋಡಿ ನಿವಾಸಿ ಸರಿತಾ(35) ಕೊಲೆಯಾದ ಮಹಿಳೆಯಾಗಿದ್ದು, ದುರ್ಗೇಶ್ ಕೊಲೆ ಮಾಡಿದ ಆರೋಪಿ. ಈತನನ್ನು ಪೊಲೀಸರು ಬಂಧಿಸಿದ್ದಾರೆ.


ದುರ್ಗೇಶ ಎಂಬಾತ ನಿನ್ನೆ ರಾತ್ರಿ 8.30 ಕ್ಕೆ ಕುಡಿದು ಬಂದು ತನ್ನ ಹೆಂಡತಿ ಸರಿತಾ ಜೊತೆಯಲ್ಲಿ ಜಗಳ ಮಾಡಿದ್ದಾನೆ. ಬಳಿಕ ಮರದ ರೀಪಿನಿಂದ ಹೊಡೆದು ಪತ್ನಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

Join Whatsapp