ಪೊಲೀಸ್ ಪೇದೆಯ ನಿರ್ಲಕ್ಷ್ಯದಿಂದ ಹಾರಿದ ಗುಂಡು; ಮೊಬೈಲ್ ಅಂಗಡಿ ಸಿಬ್ಬಂದಿ ಗಂಭೀರ

Prasthutha|

ಚಂಡೀಗಡ: ಪೊಲೀಸ್ ಪೇದೆಯ ಕೈಯಲ್ಲಿದ್ದ ಬಂದೂಕಿನಿಂದ ಅಚಾನಕ್ಕಾಗಿ ಹಾರಿದ ಗುಂಡು ಮೊಬೈಲ್ ಅಂಗಡಿಯ ಸಿಬ್ಬಂದಿಗೆ ತಗುಲಿ ಗಂಭೀರ ಗಾಯಗೊಂಡಿರುವ ಘಟನೆ ಪಂಜಾಬ್ ನ ಅಮೃತಸರದಲ್ಲಿ ನಡೆದಿದೆ.

- Advertisement -

ಮೊಬೈಲ್ ಅಂಗಡಿಗೆ   ಬಂದಿದ್ದ ಪೊಲೀಸ್ ಅಧಿಕಾರಿ  ತಮ್ಮ ಪಕ್ಕದಲ್ಲಿದ್ದ ವ್ಯಕ್ತಿಗೆ ತಮ್ಮ ಬಂದೂಕಿನ ವಿವರಣೆಯನ್ನು ನೀಡುತ್ತಿದ್ದು,ಈ ವೇಳೆ ಅಚಾನಕ್ಕಾಗಿ ಬಂದೂಕಿನಿಂದ ಹಾರಿದ ಗುಂಡು ಮೊಬೈಲ್ ಅಂಗಡಿಯ ಸಿಬ್ಬಂದಿಗೆ ತಗುಲಿದೆ. ಗಂಭೀರ ಗಾಯಗೊಂಡ ಯುವಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯುವಕನ ಅರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ  ಎಸಿಪಿ ಅಮರಿಂದರ್ ಸಿಂಗ್ ಘಟನೆಗೆ ಸಂಬಂಧಿಸಿ ವಿಡಿಯೋ ಪರಿಶೀಲನೆ ನಡೆಸಿ, ನಿರ್ಲಕ್ಷ್ಯವಹಿಸಿದ ಪೊಲೀಸ್ ಅಧಿಕಾರಿಯನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ.

Join Whatsapp