ಕಾಂಗ್ರೆಸ್ ತನ್ನ ನೂತನ ನಾಯಕತ್ವವನ್ನು ಪರಿಚಯಿಸಲಿ: ಸಂಸದ ಶಶಿ ತರೂರ್

Prasthutha|

ತಿರುವನಂತಪುರಂ: ಕಾಂಗ್ರೆಸ್ ಪಕ್ಷ ತಕ್ಷಣ ನೂತನ ನಾಯಕತ್ವವನ್ನು ಪರಿಚಯಿಸಲಿ ಎಂದು ಸಂಸದ ಶಶಿ ತತೂರ್ ಇಂದು ಹೇಳಿದ್ದಾರೆ. ಅವರು ಕೇರಳದ ತಿರುವನಂತಪುರಂ ನಿಂದ 3 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

- Advertisement -

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕಿಯಾದ ಸೋನಿಯಾ ಗಾಂಧಿಯ ವಿರುದ್ಧ ಯಾರೂ ಕೂಡ ಅಪಸ್ವರ ಎತ್ತಿಲ್ಲ. ಸ್ವಯಂ ಅವರು ರಾಜೀನಾಮೆಯ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ನೂತನ ನಾಯಕರು ಮುನ್ನಡೆಸಲಿ ಎಂದು ತರೂರ್ ತಿಳಿಸಿದರು. ರಾಹುಲ್ ಗಾಂಧಿ ಪಕ್ಷವನ್ನು ಮುನ್ನಡೆಸಲು ಬಯಸಿದರೆ, ಅವರಿಗೆ ಪಟ್ಟಾಭಿಷೇಕ ನಡೆಯಲಿ ಎಂದು ಪಂಜಾಬ್ ಘಟಕದಲ್ಲಿ ಆಂತರಿಕ ಬಿಕ್ಕಟ್ಟು ಉಲ್ಬಣಗೊಂಡಿರುವುದರ ಕುರಿತು ಮಾಧ್ಯಮಗಳಿಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಪಕ್ಷ ಮರಳಿ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಹೈಕಮಾಂಡ್ ತಕ್ಷಣ ನಾಯಕತ್ವ ಬದಲಾವಣೆ ನಡೆಸಿ, ಚುನಾವಣೆಗೆ ಸಿದ್ದತೆ ನಡೆಸಲಿ ಎಂದು ತರೂರ್ ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡಿದರು.

- Advertisement -

ಈ ಹಿಂದೆ ನಾಯಕತ್ವ ಬದಲಾವಣೆ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಪತ್ರ ಬರೆದು ಗಮನ ಸೆಳೆದಿದ್ದರು.

Join Whatsapp