ಕಾಬೂಲ್ ಗುರುದ್ವಾರದ ಮೇಲೆ ಉಗ್ರರ ದಾಳಿ: ದೇವಾಲಯ ರಕ್ಷಿಸಲು 3 ಗಂಟೆಗಳ ಕಾಲ ಹೋರಾಡಿದ ತಾಲಿಬಾನ್ ಪಡೆ!

Prasthutha|

ಪ್ರವಾದಿಯನ್ನು ನಿಂದಿಸಿದ ಭಾರತೀಯ ರಾಜಕಾರಣಿಗಳಿಗೆ ಪ್ರತಿಕ್ರಿಯೆ ಎಂದ ದಾಳಿಕೋರರು

- Advertisement -

ಕಾಬೂಲ್: ಕಾಬೂಲ್ ನ ಗುರುದ್ವಾರವನ್ನು ಉಗ್ರರು ಗುರಿಯಾಗಿಸಿಕೊಂಡು ದಾಳಿ ಮಾಡಲು ಪ್ರಯತ್ನಿಸಿದ್ದು, ಈ ವೇಳೆ ತಾಲಿಬಾನ್ ಯೋಧರು ಅವರ ಜೊತೆ 3 ಗಂಟೆಗಳ ಕಾಲ ಹೋರಾಡಿದ್ದಾರೆ.

ನಮ್ಮ ಪ್ರವಾದಿಯನ್ನು ಅವಮಾನಿಸಿದ ಭಾರತೀಯ ರಾಜಕಾರಣಿಗಳಿಗೆ ಪ್ರತಿಕ್ರಿಯೆ ಎಂದು “ಐಎಸ್ ಕೆ ಪಿ” ಹೇಳಿಕೊಂಡು, ಹಿಂದೂ ದೇವಾಲಯಗಳ ದಾಳಿ ಮಾಡಲು ಬಂದಿತ್ತು, ಅವರ ಜೊತೆ ತಾಲಿಬಾನ್ ಯೋಧರು ಮೂರು ಗಂಟೆಗಳ ಕಾಲ ದೇವಾಲಯವನ್ನು ರಕ್ಷಿಸಲು ಹೋರಾಡಿದ್ದಾರೆ. ಆದರೆ ಈ ವೇಳೆ ಒಬ್ಬ ತಾಲಿಬಾನ್ ಯೋಧ ಹಾಗೂ ಸಿಖ್ಖ್ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ಶನಿವಾರ ಕಾಬೂಲ್ ನ ಬಾಗ್-ಎ ಬಾಲಾ ಪಕ್ಕದಲ್ಲಿದ್ದ ಗುರುದ್ವಾರ ಪರ್ವಾನ್ ನಲ್ಲಿ ಹಲವಾರು ಸ್ಫೋಟಗಳನ್ನು ಸಂಗ್ರಹಿಸಲಾಗಿತ್ತು. ಆದರೆ ಅಫ್ಘಾನ್ ಭದ್ರತಾ ಸಿಬ್ಬಂದಿ ಸ್ಫೋಟಕ ತುಂಬಿದ ವಾಹನವನ್ನು ತಡೆದು ನಿಲ್ಲಿಸುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.

Join Whatsapp