ಮಂಗಳೂರು: ಸ್ಟೇಟ್ ಬ್ಯಾಂಕ್ ವ್ಯಾಪಾರಿಗಳ ಒಕ್ಕೂಟದಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ

Prasthutha|

ಮಂಗಳೂರು: ನಗರದ ರಾವ್‌ & ರಾವ್ ಸರ್ಕಲ್ ಪರಿಸರದಲ್ಲಿ ಪೋಲಿಸ್ ಇಲಾಖೆಯು ಮಾಡಿದ ವಾಹನ ಸಂಚಾರದ ಮಾರ್ಪಾಡಿನಿಂದ ಸ್ಥಳೀಯ ವ್ಯಾಪಾರಿಗಳು ವ್ಯಾಪಾರವನ್ನು ಕಳೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್ ಡಿ’ಸೋಜರವರ ನೇತೃತ್ವದ ವ್ಯಾಪಾರಿಗಳ ಒಕ್ಕೂಟವು ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಸಮಸ್ಯೆಗಳ ಪರಿಹಾರಕ್ಕಾಗಿ ಚರ್ಚೆ ನಡೆಸಿತು.

- Advertisement -

ಸಿಟಿ ಬಸ್ ನಿಲ್ದಾಣ ಸ್ಥಳಾಂತರದಿಂದ ಸುಮಾರು 480 ಅಂಗಡಿ ವ್ಯಾಪಾರಸ್ತರಿಗೆ ಶೇ.90ರಷ್ಟು ವ್ಯಾಪಾರ ಕಡಿತವಾಗಿದೆ. ಹಾಗಾಗಿ ವ್ಯಾಪಾರಿಗಳ ಮತ್ತು ಜನರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಜಯಶೆಟ್ಟಿ ಎಕ್ಕೂರು, ಉಪಾಧ್ಯಕ್ಷ ಮಹಮ್ಮದ್ ಇಕ್ಬಾಲ್, ಶಾಕಿರ್, ನಾಗರಾಜ್, ಮಹಮ್ಮದ್‌ ಮೆಡಿಕಲ್, ರಘುನಾಯಕ್, ಅಮಿದ್‌ಷಾ ಮತ್ತಿತರರು ಉಪಸ್ಥಿತರಿದ್ದರು.

Join Whatsapp