ಜಾನುವಾರು ಹತ್ಯೆ ತಡೆಯುವಂತೆ ಡಿಜಿಪಿಗೆ ಪತ್ರ ಬರೆದ ಸ್ಪೀಕರ್

Prasthutha|

ಮುಂಬೈ: ಬಕ್ರೀದ್ ಹಬ್ಬದ ವೇಳೆ ಜಾನುವಾರು ಹತ್ಯೆ ತಡೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಸೂಚಿಸಿದ್ದಾರೆ.

- Advertisement -

ಗೋಹತ್ಯೆ ನಿಷೇಧ ಕಾಯ್ದೆಯ ಉಲ್ಲಂಘನೆ ಆಗದಂತೆ ಜಾಗ್ರತೆ ವಹಿಸುವ ಕುರಿತು ಡಿಜಿಪಿ ಅವರಿಗೆ ರಾಹುಲ್ ನಾರ್ವೇಕರ್ ಪತ್ರ ಬರೆದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಹೊರ ರಾಜ್ಯಗಳಿಂದ ಅಕ್ರಮವಾಗಿ ಗೋವುಗಳನ್ನು ಹಾಗೂ ಗೋಮಾಂಸ ಸಾಗಣೆ ಮಾಡುವವರ ಮೇಲೆ ನಿಗಾ ಇಡಬೇಕು ಎಂದು ರಾಹುಲ್ ನಾರ್ವೇಕರ್ ಸೂಚಿಸಿದ್ದಾರೆ.

Join Whatsapp