ರಾಮನನ್ನು ನೀವು ಗುತ್ತಿಗೆ ತೆಗೆದುಕೊಂಡಿಲ್ಲ; ನನ್ನ ಹೆಸರಿನಲ್ಲಿಯೂ ರಾಮನಿದ್ದಾನೆ: ಸಿದ್ದರಾಮಯ್ಯ

Prasthutha|

ಬೆಂಗಳೂರು: ರಾಮನನ್ನ ನೀವೇನಾದ್ರು ಗುತ್ತಿಗೆ ತೆಗೆದುಕೊಂಡಿದ್ದೀರೇನ್ರೀ? ನನ್ನ ಹೆಸರಿನಲ್ಲಿಯೂ ರಾಮನಿದ್ದಾನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಸವರಾಜ ಬೊಮ್ಮಾಯಿಗೆ ಟಾಂಗ್ ಕೊಟ್ಟಿದ್ದಾರೆ.

- Advertisement -

ವಿಧಾನಸಭೆಯ ಕಲಾಪದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯಸಭೆಯ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರ ಟ್ವೀಟ್ ಪ್ರಸ್ತಾಪಿಸಿ ‘ರಾಮನ ಭಾರತದಲ್ಲಿ ಲೀಟರ್‌ ಪೆಟ್ರೋಲ್ ಬೆಲೆ 93 ರೂ.; ಸೀತೆಯ ನೇಪಾಳದಲ್ಲಿ ಲೀಟರ್​ ಪೆಟ್ರೋಲ್ ದರ 51 ರೂ.; ರಾವಣನ ಶ್ರೀಲಂಕಾದಲ್ಲಿ ಲೀಟರ್​​ ಪೆಟ್ರೋಲ್ ದರ 53ರೂಪಾಯಿ’ ಎಂದು ಅವರು ಬಿಜೆಪಿಯ ಕಾಲೆಳೆದಿದ್ದಾರೆ.

ಆಗ, ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿಮ್ಮ ಬಾಯಲ್ಲಿ ‘ಜೈಶ್ರೀರಾಮ್’ ಎಂದು ಕೇಳುವುದು ಚೆಂದ ಎಂದು ಟಾಂಗ್​ ಕೊಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ರಾಮನನ್ನು ನೀವೇನಾದ್ರು ಗುತ್ತಿಗೆ ತೆಗೆದುಕೊಂಡಿದ್ದೀರೇನ್ರೀ? ನನ್ನ ಹೆಸರಿನಲ್ಲಿಯೂ ರಾಮನಿದ್ದಾನೆ” ಎಂದು ತಿರುಗೇಟು ನೀಡಿದ್ದಾರೆ.

Join Whatsapp