ಮುತ್ತಲಿಬ್ ನಾರ್ಶ ನಿಗೂಢ ಸಾವು । ಮೃತದೇಹ ಪತ್ತೆಗೆ ಸಹಕರಿಸಿದ ದುಬೈ ಕೆಸಿಎಫ್

Prasthutha|

- Advertisement -

ಬಂಟ್ವಾಳ ತಾಲೂಕಿನ ಕಲ್ಲಡ್ಕ ಬೋಳಂತೂರು ನಾರ್ಶದ ನಿವಾಸಿ ಮುತ್ತಲಿಬ್ ಎಂಬವರು ದುಬೈನಲ್ಲಿ ನಿಗೂಢವಾಗಿ ಮೃತಪಟ್ಟಿದ್ದು , ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ನ ದುಬೈ ಘಟಕದ ಸಹಕಾರದೊಂದಿಗೆ ಮೃತದೇಹವನ್ನು ಇಂದು ದುಬೈ ಪೊಲೀಸರು ಪತ್ತೆ ಮಾಡಿದ್ದಾರೆ.
ಕಳೆದ ಕೆಲವು ದಿವಸಗಳಿಂದ ಮುತ್ತಲಿಬ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮುತ್ತಲಿಬ್ ಅವರು ಯಾರ ಸಂಪರ್ಕಕ್ಕೂ ದೊರಕ್ಕುತ್ತಿರಲಿಲ್ಲ ಎನ್ನಲಾಗಿದೆ. ಮಾರ್ಚ್ 7 ರಂದು ದುಬೈ ಅಲ್ ರಫಾದಲ್ಲಿ ಮುತ್ತಲಿಬ್ ಅವರ ಪಾಸ್ಪೋರ್ಟ್ ಆಧಾರದಲ್ಲಿ ಭಾರತೀಯ ಪ್ರಜೆ ಎಂದು ಅವರನ್ನು ಗುರುತಿಸಲಾಗಿದ್ದು, ಕೆಸಿಎಫ್ ಸಂಘಟನೆಯ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ತಹಶೀಲ್ದಾರ್ ಮೂಲಕ ವಿಳಾಸವನ್ನು ಪತ್ತೆ ಹಾಕಲಾಗಿದೆ .

ಮುತ್ತಲಿಬ್ ನಾರ್ಶ ಪ್ರತಿಭಾವಂತ ಅಂಕಣಕಾರರಾಗಿದ್ದರು. ಜಯಕಿರಣ ,ಮದರಂಗಿ ಪತ್ರಿಕೆಯ ಖಾಯಂ ಬರಹಗಾರರಾಗಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದರು.

Join Whatsapp