ಮಂಗಳೂರು ಮೋರ್ಗನ್ಸ್ ಗೇಟ್ ಬಳಿ ಶೂಟೌಟ್ !

Prasthutha|

ಮಂಗಳೂರಿನ ಮೋರ್ಗನ್ಸ್ ಗೇಟ್ ಬಳಿ ಇಂದು ಶೂಟೌಟ್ ನಡೆದಿದೆ. ಉದ್ಯಮಿಯೋರ್ವರು ಕೋಪದಿಂದ ಹಾರಿಸಿದ ಗುಂಡು ತನ್ನ ಸ್ವಂತ ಮಗನ ತಲೆಗೆ ತಾಗಿ ಗಂಭೀರ ಗಾಯವಾಗಿದೆ. ವೈಷ್ಣವಿ ಎಕ್ಸ್’ಪ್ರೆಸ್ ಕಾರ್ಗೋ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲಕ ರಾಜೇಶ್ ಪ್ರಭು ಅವರ ಬಳಿ ಸಂಸ್ಥೆಯ ಕೆಲಸದಾಳು ಓರ್ವರು ಸಂಬಳ ಕೇಳಲು ಬಂದಿದ್ದರು. ಈ ವೇಳೆಇಬ್ಬರ ಮಧ್ಯೆ ಜಟಾಪಟಿ ನಡೆದು, ಕೋಪಗೊಂಡ ರಾಜೇಶ್ ಪ್ರಭು ಕೆಲಸದಾಳುವಿನ ಮೇಲೆ ಗುಂಡು ಹಾರಿಸಿದ್ದು, ಗುಂಡು ತನ್ನ ಸ್ವಂತ ಮಗನ ತಲೆಗೆ ತಾಗಿದೆ.

- Advertisement -

ಮಗ ಸುಧೀಂದ್ರ (14) ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಾಗಿದ್ದು, ಅಪ್ಪನ ಅವಾಂತರಕ್ಕೆ ಗುರಿಯಾದ ಮಗನಾಗಿದ್ದಾರೆ. ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Join Whatsapp