ಪ್ರಿಯಾಂಕಾ ಗಾಂಧಿ ಬಂಧನ ಸಂಪೂರ್ಣ ಕಾನೂನುಬಾಹಿರ: ಕಾಂಗ್ರೆಸ್ ನಾಯಕ ಪಿ. ಚಿದಂಬರಂ

Prasthutha|

ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಂಧನ ಸಂಪೂರ್ಣ ಕಾನೂನು ಬಾಹಿರ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ತಿಳಿಸಿದ್ದಾರೆ. ಮಾತ್ರವಲ್ಲ ಇಂತಹ ಬಂಧನಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

- Advertisement -

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ರೈತರ ಮೇಲೆ ಕಾರು ಹರಿಸಿ ಹತ್ಯೆ ನಡೆಸಿದ ಲಖಿಂಪುರ ಘಟನೆಯನ್ನು ಅಲ್ಲಿಗೆ ಭೇಟಿಗೆ ಮುಂದಾದ ವೇಳೆಯಲ್ಲಿ ಉ.ಪ್ರದೇಶದ ಸೀತಾಪುರದಲ್ಲಿ ಬಂಧಿಸಲಾಗಿತ್ತು.

ಅಕ್ಟೋಬರ್ 4 ರಂದು ಲಖಿಂಪುರ ಘಟನೆಯಲ್ಲಿ ಸಂತ್ರಸ್ತರನ್ನು ಭೇಟಿಯಾಗಲು ಅಲ್ಲಿಗೆ ತಲುಪಿದ ಪ್ರಿಯಾಂಕಾ ಗಾಂಧಿ ಅವರನ್ನು ಬೆಳಗ್ಗೆ 4.30 ಕ್ಕೆ ಸೀತಾಪುರದ ಅತಿಥಿ ಗೃಹದಲ್ಲಿ ಬಂಧಿಸಲಾಗಿತ್ತು. ಉ.ಪ್ರದೇಶ ಸರ್ಕಾರ ಈ ಕೃತ್ಯ ಕಾನೂನುಬಾಹಿರ ಎಂದು ಚಿದಂಬರಂ ಬಣ್ಣಿಸಿದ್ದಾರೆ.

- Advertisement -

ಪ್ರಸಕ್ತ ಅವರ ವಿರುದ್ಧ ಸಿ.ಆರ್.ಪಿ.ಸಿ 151 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಾತ್ರವಲ್ಲ ಬಂಧನದ 30 ಗಂಟೆಯ ನಂತರ ನ್ಯಾಯಾಂಗದ ಮುಂದೆ ಹಾಜರುಪಡಿಸದಿರುವುದು ದುರಂತ ಬೆಳವಣಿಗೆ.

Join Whatsapp