ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಂಜಲಿ ಸಿಂಗ್’ರ ಕುಟುಂಬಕ್ಕೆ ಧನಸಹಾಯ ನೀಡಿದ ಶಾರೂಕ್ ಖಾನ್

Prasthutha|

ಮುಂಬೈ: ಬಾಲಿವುಡ್ ನಟ ಶಾರೂಕ್ ಖಾನ್ ಅವರ ಸಂಸ್ಥೆ “ಮೀರ್ ಫೌಂಡೇಶನ್” ದೆಹಲಿಯಲ್ಲಿ ಇತ್ತೀಚೆಗೆ ಅಪಘಾತದಲ್ಲಿ ಸಾವನ್ನಪ್ಪಿದ ಅಂಜಲಿ ಸಿಂಗ್’ರ ಸಂತ್ರಸ್ತ ಕುಟುಂಬಕ್ಕೆ ಭಾರೀ ಮೊತ್ತದ ನೆರವನ್ನು ನೀಡಿದೆ.

- Advertisement -


ದಿಲ್ಲಿಯ ಕಂಜವಾಲಾದಲ್ಲಿ ಭೀಕರ ಅಪಘಾತದಲ್ಲಿ 20ರ ಹರೆಯದ ಅಂಜಲಿ ಸಿಂಗ್ ದೇಹ ಪತ್ತೆಯಾಗಿತ್ತು. ಅಂಜಲಿಯವರ ತಾಯಿ ಅನಾರೋಗ್ಯಕ್ಕೀಡಾಗಿದ್ದಾರೆ. ಇಬ್ಬರು ತಮ್ಮಂದಿರು ಸಣ್ಣ ಪ್ರಾಯದವರು. ಅವರ ಬದುಕಿಗೆ ನೆರವಾಗುವ ರೀತಿಯಲ್ಲಿ ಮೀರ್ ಫೌಂಡೇಶನ್ ಮುಂದೆ ಬಂದಿದೆ” ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.


ಹಿಂದೆಯೂ ಮೀರ್ ಫೌಂಡೇಶನ್ ಮಹಿಳೆಯರು, ಮಕ್ಕಳ ಹಿತರಕ್ಷಣೆ ಕಾಪಾಡಲು ನೆರವು ನೀಡಿತ್ತು. ಅಂಜಲಿ ಸಿಂಗ್ ಅವರು ಹೊಸ ವರ್ಷದ ದಿನ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಕಾರೊಂದು ನಾಲ್ಕು ಕಿಲೋಮೀಟರ್’ವರೆಗೆ ಅವರ ಸ್ಕೂಟಿಯನ್ನು ಎಳೆದೊಯ್ದು ಸಂಭವಿಸಿದ ಅಪಘಾತದಲ್ಲಿ ಅಂಜಲಿ ಸಾವನ್ನಪ್ಪಿದ್ದರು.

Join Whatsapp