ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ: ಅನ್ವರ್ ಮಾಣಿಪ್ಪಾಡಿ ವಿರುದ್ಧ ಶಾಫಿ ಸಅದಿ ತೀಕ್ಷ್ಣ ಪ್ರತಿಕ್ರಿಯೆ

Prasthutha|

ಮಂಗಳೂರು: ವಕ್ಪ್ ಹಗರಣದಲ್ಲಿ ಶಾಫಿ ಸಅದಿ ಭಾಗಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅನ್ವರ್ ಮಾಣಿಪಾಡಿ ಆರೋಪಿಸಿದ್ದು, ಮಾಣಿಪಾಡಿ ಆರೋಪಕ್ಕೆ ಶಾಫಿ ಸಅದಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಶಾಫಿ ಸಅದಿ, ಅನ್ವರ್ ಮಾಣಿಪ್ಪಾಡಿಯವರ ಟ್ವೀಟನ್ನು ಗಮನಿಸಿದ್ದೇನೆ. ವಕ್ಫ್ ಬೋರ್ಡ್ ಅಧ್ಯಕ್ಷ ಚುನಾವಣೆಯ ಆತಂಕ,ಅಸೂಯೆ ಮತ್ತು ಹತಾಶೆಯನ್ನು ಸಹಿಸಲಾಗದೆ ಮಾಣಿಪ್ಪಾಡಿ ಮಾಡಿರುವ ಆಧಾರರಹಿತ ಆರೋಪಕ್ಕೆ ಅವರು ಪ್ರಾಯದಲ್ಲಿ ಹಿರಿಯರು ಎಂಬ ಕಾರಣಕ್ಕೆ ನಾನು ಉತ್ತರಿಸಿಲ್ಲ. ಸುಳ್ಳಾರೋಪ ಹರಡುವ ಅವರನ್ನು ನಾನು ಯಾವತ್ತೂ ಕ್ಷಮಿಸುತ್ತೇನೆ. ಆದರೆ ನನ್ನ ಸಹ ಕಾರ್ಯಕರ್ತರು ಕಾನೂನು ಕ್ರಮಕ್ಕಿಳಿದರೆ ನಾನು ಹೊಣೆಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಶಾಫಿ ಸಅದಿ ವಿರುದ್ಧ ವಕ್ಫ್ ನ ಹಣ ದುರ್ಬಳಕೆ ಮಾಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್, ಅವರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳುತ್ತೀರಿ ಎಂದು ಸರ್ಕಾರದೊಂದಿಗೆ ಪ್ರಶ್ನಿಸಿತ್ತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಲಾಗಿದೆ.

Join Whatsapp