ಈಶ್ವರಪ್ಪ ಪ್ರಚೋದನಾಕಾರಿ ಭಾಷಣ| ಇಂದು ದೇರಳಕಟ್ಟೆಯಲ್ಲಿ SDPI ವತಿಯಿಂದ ಪ್ರತಿಭಟನೆ

Prasthutha|

ಮಂಗಳೂರು: ಅಲ್ಲಾಹನ ಕುರಿತು ಹಾಗೂ ಅಝಾನ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಹಾಗೂ ಶಾಸಕ ಕೆ.ಎಸ್‌. ಈಶ್ವರಪ್ಪನ ವಿರುದ್ಧ ಹಾಗೂ ಆಡಳಿತ ಬಿಜೆಪಿ ಪಕ್ಷದ ಕೊಳಕು ಮನಸ್ಥಿತಿಯ ವಿರುದ್ಧ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (SDPI) ವತಿಯಿಂದ ಇಂದು(ಶುಕ್ರವಾರ) ಸಂಜೆ 4.30 ಗಂಟೆಗೆ ದೇರಳಕಟ್ಟೆ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಲಿದೆ.

- Advertisement -

ಮಂಗಳೂರಿನ ಕಾವೂರಿನಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಾಹನ ಕುರಿತು ಹಾಗೂ ಆಝಾನ್ ವಿರುದ್ಧ ಈಶ್ವರಪ್ಪ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಮಸೀದಿಯಿಂದ ಆಝಾನ್​ ಮೊಳಗುತ್ತಿದ್ದಂತೆಯೇ ಸಿಟ್ಟಾದ ಅವರು, ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು. ಮೈಕ್​ನಲ್ಲಿ ಕೂಗಿದರೆ ಮಾತ್ರ ಅಲ್ಲಾಹನಿಗೆ ಕೇಳೋದಾ..? ಕೇಳದಿದ್ದರೆ ಅಲ್ಲಾಹನನ್ನು ಕಿವುಡನೆಂದು ಹೇಳಬೇಕಾಗುತ್ತದೆ. ಆಝಾನ್ ಇಂದಲ್ಲ ನಾಳೆ ಕೊನೆಯಾಗುತ್ತೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದರು. ಈಶ್ವರಪ್ಪ ನೀಡಿದ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

Join Whatsapp