ಕೋರ್ಟ್‌ಗೆ ಬಾಂಬ್‌ ಇಟ್ಟ ಡಿಆರ್‌ಡಿಒ ವಿಜ್ಞಾನಿ ಆತ್ಮಹತ್ಯೆಗೆ ಯತ್ನ

Prasthutha|

ದೆಹಲಿ: ಪಕ್ಕದ ಮನೆಯ ವಕೀಲರೊಬ್ಬರನ್ನು ಕೊಲ್ಲಲು ದೆಹಲಿಯ ರೋಹಿಣಿ ಜಿಲ್ಲಾ ನ್ಯಾಯಾಲಯದೊಳಗೆ ಸ್ಫೋಟಕವಿರಿಸಿದ ಆರೋಪದಲ್ಲಿ ಸೆರೆಯಾಗಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ವಿಜ್ಞಾನಿ ಪೊಲೀಸ್ ವಶದಲ್ಲಿರುವಾಗಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

- Advertisement -

ಶೌಚಗೃಹದಲ್ಲಿ ಹ್ಯಾಂಡ್ ವಾಶ್ ಕುಡಿದು ಭರತ್‌ ಭೂಷಣ್‌ ಕಟಾರಿಯಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಟಾರಿಯಾ ಅವರು ಸದ್ಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

- Advertisement -

ಡಿ. 9ರಂದು ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದರು. ಇದರ ಹಿಂದೆ ಕಟಾರಿಯಾ ಕೈವಾಡವಿರುವುದು ಗೊತ್ತಾದ ಹಿನ್ನೆಲೆಯಲ್ಲಿ ಶುಕ್ರವಾರ ಅವರನ್ನು ಬಂಧಿಸಲಾಗಿದೆ.

Join Whatsapp