‘ಹಲಾಲ್ ಆಹಾರ’ದ ವಿಚಾರದಲ್ಲಿ ಧರ್ಮವನ್ನು ಎಳೆದು ತರಬೇಡಿಯೆಂದ ತಮ್ಮದೇ ನಾಯಕನಿಗೆ ಬೆದರಿಕೆ ಹಾಕಿದ ಸಂಘಪರಿವಾರ ಕಾರ್ಯಕರ್ತರು!

Prasthutha|

ಸಂದೀಪ್ ವಾರಿಯರ್ ಮನೆಗೆ ದಾಳಿ ನಡೆಸಿದ ಕಿಡಿಗೇಡಿಗಳು

- Advertisement -

ಪಾಲಕ್ಕಾಡ್: ಹಲಾಲ್ ವಿಚಾರದಲ್ಲಿ ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಅವರ ನಿಲುವಿನ ವಿರುದ್ಧ ಫೇಸ್‌ಬುಕ್‌ ನಲ್ಲಿ ಪೋಸ್ಟ್ ಮಾಡಿದ್ದ ರಾಜ್ಯದ ಬಿಜೆಪಿ ನಾಯಕ ಸಂದೀಪ್ ವಾರಿಯರ್ ಗೆ ಸಂಘಪರಿವಾರದ ನಾಯಕನೊಬ್ಬ ಬೆದರಿಕೆ ಹಾಕುವ ವೀಡಿಯೋ ಈಗ ಭಾರೀ ವೈರಲಾಗಿದೆ.

“ಜಿಹಾದಿಗಳು ಉಗುಳಿ ಕೊಡುವ ಆಹಾರವನ್ನು ತಾವೇ ತಿನ್ನಿ, ಅದು ಬಿಟ್ಟು ಸಮಾಜಕ್ಕೆ ತಿನ್ನಲು ಆದೇಶಿಸಬೇಡಿ. ಒಂದು ವೇಳೆ ನೀವು ಇನ್ನೂ ಮುಂದುವರಿಯುವುದಾದರೆ ತ್ರಿಶೂರಿನಲ್ಲಿ ನಡೆದಿರುವ ಕೆಲವು ಪ್ರಕರಣಗಳನ್ನು ಬಹಿರಂಗಪಡಿಸಲಿದ್ದೇವೆ ಎಂದು ಸಂಘಪರಿವಾರದ ನಾಯಕ ಪರೋಕ್ಷವಾಗಿ ಬೆದರಿಕೆ ಹಾಕಿದ್ದಾನೆ.

- Advertisement -

ಫೇಸ್‌ಬುಕ್ ಪೋಸ್ಟ್ ವಿಚಾರದಲ್ಲಿ ಸಂಘಪರಿವಾರದ ಕಾರ್ಯಕರ್ತರು ಬೆದರಿಕೆ ಹಾಕಿ ತನ್ನ ಮನೆಯ ಮೇಲೆ ದಾಳಿ ನಡೆಸಿದಾಗ ಸಂದೀಪ್ ವಾರಿಯರ್ ಹಲಾಲ್ ಪರ ತಮ್ಮ ಪೋಸ್ಟ್ ಅನ್ನು ಅಳಿಸಿದ್ದಾರೆ.

ಆಹಾರದಲ್ಲಿ ಧರ್ಮವನ್ನು ಎಳೆದು ತರುವುದು ಸರಿಯಲ್ಲ ಎಂಬುದು ಸಂದೀಪ್ ಅವರ ನಿಲುವು. ಹಲಾಲ್ ವಿಷಯವನ್ನು ಪ್ರಚಾರದ ಅಸ್ತ್ರವಾಗಿಸಲು ಮುಂದಾಗಿದ್ದ ಬಿಜೆಪಿ ಅಧ್ಯಕ್ಷರ ಹೇಳಿಕೆಯನ್ನು ವಾರಿಯರ್ ಫೇಸ್ ಬುಕ್ ಪೋಸ್ಟ್ ನಲ್ಲಿ ವಿರೋಧಿಸಿದ್ದರು.

Join Whatsapp