ಹೈನುಗಾರಿಕೆಗೆ ದನ ಕೊಂಡೊಯ್ಯುತ್ತಿದ್ದಾಗ ಬಜರಂಗದಳದ ಕಾರ್ಯಕರ್ತರಿಂದ ದಾಳಿ; ರೈತರ ಮೇಲೆ ಹಲ್ಲೆ

Prasthutha|

ಬೆಳ್ತಂಗಡಿ: ಕೃಷಿ ಮತ್ತು ಹೈನುಗಾರಿಕೆಗೆ ದನಗಳನ್ನು ಕೊಂಡೊಯ್ಯುತ್ತಿದ್ದ ವಾಹನವನ್ನು ಅಡ್ಡಗಟ್ಟಿದ ಬಜರಂಗದಳದ ಕಾರ್ಯಕರ್ತರು ರೈತರ ಹಲ್ಲೆ ನಡೆಸಿದ ಘಟನೆ ಕಡಿರುದ್ಯಾವರ ಗ್ರಾಮದ ಅಂಜನೊಟ್ಟು ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -


ಮೂಡಿಗೆರೆ ತಾಲೂಕಿನ ಹರೀಶ್ ಹಲ್ಲೆಗೊಳಗಾದವರು. ಇವರು ತಮ್ಮ ಮನೆಗೆಂದು ಎರಡು ದನಗಳನ್ನು ಹಾಗೂ ಒಂದು ಕರುವನ್ನು ಕಡಿರುದ್ಯಾವರದ ಶೀನಪ್ಪ ಪೂಜಾರಿ ಎಂಬವರ ಮನೆಯಿಂದ ಮಂಗಳವಾರ ಖರೀದಿಸಿಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.


ಹರೀಶ್ ಅವರ ಕಾರನ್ನು ಹಾಗೂ ದನಗಳನ್ನು ಹೇರಿಕೊಂಡು ಹೋಗುತ್ತಿದ್ದ ಟಾಟಾ ಏಸ್ ವಾಹನವನ್ನು ತಡೆದ ಬಜರಂಗ ದಳದ ಕಾರ್ಯಕರ್ತರು, ಟಾಟಾ ಏಸ್ ವಾಹನದ ಚಾಲಕ ಬಸವರಾಜು ಹಾಗೂ ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

- Advertisement -


ಇದೇ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ, ಸೂಕ್ತ ದಾಖಲೆಗಳಿಲ್ಲದೆ ದನಗಳನ್ನು ಸಾಗಾಟ ಮಾಡಿದ ಆರೋಪದಲ್ಲಿ ಬಸವರಾಜ, ಅವಿನಾಶ್, ಹರೀಶ್, ಜಿ.ಎಸ್.ಹರೀಶ್, ಶೀನ ಪೂಜಾರಿ ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp